spot_img
spot_img

ಕವನ: ಕಿತ್ತೂರಿನ ಕಲಿಯಿವಳು

Must Read

- Advertisement -

ಕಿತ್ತೂರಿನ ಕಲಿಯಿವಳು

ಕಿತ್ತೂರಿನ ಕಲಿಯಿವಳು ಕತ್ತಿಯನು ಹಿಡಿದವಳು
ಸುತ್ತೇಳು ನಾಡಿನೊಳು ಹೆಸರಾದವಳು
ಉತ್ತುವರು ನಾವುಗಳು ಬಿತ್ತುವರು ನಾವಿರಲು
ಮತ್ತೇತಕೆ ಕಪ್ಪವದು ಎಂದವಳು//ಪ

ಮಲ್ಲಸರ್ಜನ ಮಡದಿ ಬಿಲ್ವಿದ್ಯೆ ಕಲಿತವಳು
ಭಲ್ಲೆಯಲಿ ಗುರಿಯಿಟ್ಟು ಹೊಡೆದವಳು
ಕ್ಷುಲ್ಲತನದಾಂಗ್ಲರ ಸೊಲ್ಲನಡಗಿಸಿದಂತ
ಬಲ್ಲಿದನು ರಾಯಣ್ಣನ ರಾಜಮಾತೆ//1

ಮಕ್ಕಳನು ಹೊಂದಿರದೆ ಕಕ್ಕುಲತೆ ಹೊಂದುತಲಿ
ತಕ್ಕಮಗು ದತ್ತಕ್ಕೆ ಪಡೆದಂತವಳು
ಹಕ್ಕದುವೆ ಇಲ್ಲವೆನೊ ದತ್ತುಮಕ್ಕಳಿಗೆಂಬ
ಸೊಕ್ಕಿನ ಥ್ಯಾಕರೆಯನೆದುರಿಸಿದಳು//2

- Advertisement -

ಕನ್ನಡದ ನಾಡಿನೊಳು ಕುನ್ನಿಗಳು ಆಂಗ್ಲರಿಗೆ
ಮನ್ನಣೆಯ ಕೊಡದಿರುತ ಪ್ರತಿಭಟಿಸಿ
ತನ್ನತನ ಮರೆಯದೆ ಕನ್ನಡದ ನೆಲಕಾಗಿ
ಚೆನ್ನಮ್ಮ ಪ್ರಾಣವ ತೆತ್ತಿಹಳು//3

ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವದ
ಶುಭಾಶಯಗಳು


- Advertisement -

ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಢಾಳ
ತಾ ಸವಣೂರು ಜಿ ಹಾವೇರಿ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group