ಕವನ: ಶ್ರಾವಣ

Must Read

ಶ್ರಾವಣ

ಭೂಮಿಯನ್ನೆಲ್ಲ ಬಿತ್ತಿ ಹಸಿರುಗೊಳಿಸಿ
ಬಾನನ್ನೆಲ್ಲ ಮೋಡಗಳಿಂದ ಶೃಂಗರಿಸಿ
ಕೇದಿಗೆ ಸೇವಂತಿಗೆಗಳನ್ನೆಲ್ಲ ಅರಳಿಸಿ
ಶ್ರಾವಣ ಮಾಸ ಬಂತು ಸಂಭ್ರಮಿಸಿ

ಜಿಟಿ ಜಿಟಿ ಮಳೆಯ ತಂಪಿನಲಿ
ಚಿಗುರಿನಿಂತ ಬಳ್ಳಿಗಳ ಕಂಪಿನಲಿ
ಚಿಟ್ಟೆ ದುಂಬೆಗಳಾಟದ ನರ್ತನದಲಿ
ಶ್ರಾವಣಮಾಸ ಬಲು ಹಿಗ್ಗು ಬದುಕಿನಲಿ

ಕೇದಿಗೆ ,ಸಸಿಗಳ ಶೃಂಗಾರ ನಾರಿಯರಲಿ
ಜನಪದ ಕ್ರೀಡೆಗಳ ರಂಗು ಪುರುಷರಲಿ
ಜೋಕಾಲಿ ಜೀಕುವ ಹರುಷ ಮಕ್ಕಳಲಿ
ಸಂಭ್ರಮವೋ ಸಂಭ್ರಮ ಶ್ರಾವಣದ ಹಸಿರಿನಲಿ

ಹೊಸ ಉಡುಗೆ ತೊಟ್ಟ ಆನಂದದಲಿ
ಹಾಲೆರೆಯಲು ಹೋಗುವರು ಹೊಲದಲಿ
ದಾರಿಯುದ್ದ ಹಸಿರು ಕಣ್ತುಂಬಿಕೊಳ್ಳುತಲಿ
ನಡೆವರು ಶ್ರಾವಣದ ಸಡಗರವ ಸಂಭ್ರಮಿಸುತಲಿ


ಕಲ್ಲಪ್ಪ ಕವಳಿಕೆರೆ, ಮಂಗಳೂರು

Latest News

ಕರವೇ ಎಂಬುದು ಕನ್ನಡಿಗರ ಆತ್ಮಶಕ್ತಿ

ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹುಟ್ಟಿದ್ದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಯುವ ಸಮೂಹದ ಪ್ರತಿಭಟನೆಯಿಂದ. ಅನೇಕ ಸಂಘಟನೆಗಳ ಮುಖಂಡರೊಂದಿಗೆ ಸೇರಿ ಕರವೇ...

More Articles Like This

error: Content is protected !!
Join WhatsApp Group