- Advertisement -
ಮಂಚನಬೆಲೆಯಲಿ
ಹಂಚಿನ ಗುಡಿಸಲು
ಕೆಂಚರ ಬಳಗದ ನಾಯಕನು/
ಮಿಂಚಿನ ವೇಗದಿ
ಸಿಂಚನ ಗೈಯುತ
ಹಂಚಿದ ಸಾಹಿತ್ಯ ಬಂಡಾಯ//೧
ತನ್ನಯ ಜನಗಳ
ಕಣ್ಣೀರನೊರೆಸಲು
ಮುನ್ನವೆ ಮಾಡಿದ ಹೋರಾಟ/
ಭಿನ್ನತೆ ಯಳಿಸಲು
ಚೆನ್ನಾಗಿ ಹಾರಿಸಿದ
ಕನ್ನಡ ಸಾಹಿತ್ಯ ಬಾವುಟ//೨
- Advertisement -
ಉಳ್ಳವರೆಲ್ಲರ
ದಳ್ಳುರಿಯಲ್ಲಿಯೆ
ಬೆಳ್ಳುಳ್ಳಿ ತೆರದಲಿ ಬೇಯುತಲಿ/
ಹಳ್ಳಿಯ ಸೊಗಡಿನ
ಹಳ್ಳದ ತಿಳಿನೀರು
ಬೆಳ್ಳಿಯ ಪದಕವು ಬರಹದಲಿ//೩
ಹೊಡೆಯುವ ಧಣಿಗಳ
ನಡುವಲಿ ಬದುಕುತ
ಹಡೆದಳು ತಾಯಿಯು ವೆಂಕಮ್ಮ/
ದುಡಿಯುವ ಜನಗಳ
ಗುಡಿಸಲು ದೇವರು
ಮಿಡಿದಿಹ ಹೃದಯವು ಸಿದ್ಲಿಂಗಯ್ಯ//೪
ಜನಪರ ಕಾಳಜಿ
ಜನಪದ ತಜ್ಞನು
ಹೊನಲಿನ ನಾಡೋಜ ನೃಪತುಂಗ/
ಬನವದು ಕನ್ನಡ
ಕನಕದ ಕುಸುಮವು
ತನುಮನ ಸಾಧಿಸಿದ ಹೋರಾಟ//೫
- Advertisement -
ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ ಮತ್ತು ಸಾಹಿತಿ
(ಲಾವಣಿ ಗೀಗೀ ಪದ ದಾಟಿಯಲ್ಲಿ ಹಾಡಬಹುದು)