spot_img
spot_img

ಕವನ: ಡಾ|| ಸಿದ್ದಲಿಂಗಯ್ಯ ನುಡಿನಮನ

Must Read

- Advertisement -

ಮಂಚನಬೆಲೆಯಲಿ

ಹಂಚಿನ ಗುಡಿಸಲು
ಕೆಂಚರ ಬಳಗದ ನಾಯಕನು/
ಮಿಂಚಿನ ವೇಗದಿ
ಸಿಂಚನ ಗೈಯುತ
ಹಂಚಿದ ಸಾಹಿತ್ಯ ಬಂಡಾಯ//೧

ತನ್ನಯ ಜನಗಳ
ಕಣ್ಣೀರನೊರೆಸಲು
ಮುನ್ನವೆ ಮಾಡಿದ ಹೋರಾಟ/
ಭಿನ್ನತೆ ಯಳಿಸಲು
ಚೆನ್ನಾಗಿ ಹಾರಿಸಿದ
ಕನ್ನಡ ಸಾಹಿತ್ಯ ಬಾವುಟ//೨

- Advertisement -

ಉಳ್ಳವರೆಲ್ಲರ
ದಳ್ಳುರಿಯಲ್ಲಿಯೆ
ಬೆಳ್ಳುಳ್ಳಿ ತೆರದಲಿ ಬೇಯುತಲಿ/
ಹಳ್ಳಿಯ ಸೊಗಡಿನ
ಹಳ್ಳದ ತಿಳಿನೀರು
ಬೆಳ್ಳಿಯ ಪದಕವು ಬರಹದಲಿ//೩

ಹೊಡೆಯುವ ಧಣಿಗಳ
ನಡುವಲಿ ಬದುಕುತ
ಹಡೆದಳು ತಾಯಿಯು ವೆಂಕಮ್ಮ/
ದುಡಿಯುವ ಜನಗಳ
ಗುಡಿಸಲು ದೇವರು
ಮಿಡಿದಿಹ ಹೃದಯವು ಸಿದ್ಲಿಂಗಯ್ಯ//೪

ಜನಪರ ಕಾಳಜಿ
ಜನಪದ ತಜ್ಞನು
ಹೊನಲಿನ ನಾಡೋಜ ನೃಪತುಂಗ/
ಬನವದು ಕನ್ನಡ
ಕನಕದ ಕುಸುಮವು
ತನುಮನ ಸಾಧಿಸಿದ ಹೋರಾಟ//೫

- Advertisement -

ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ ಮತ್ತು ಸಾಹಿತಿ

(ಲಾವಣಿ ಗೀಗೀ ಪದ ದಾಟಿಯಲ್ಲಿ ಹಾಡಬಹುದು)

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group