ಶಿವಮೊಗ್ಗ – ಹಾವೇರಿಯಲ್ಲಿ ನಡೆಯಲಿರುವ ೮೬ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಾಡಿನಾದ್ಯಂತ ಸಂಚರಿಸುತ್ತಿರುವ ಭುವನೇಶ್ವರಿ ದೇವಿಯನ್ನು ಹೊತ್ತ ಕನ್ನಡ ರಥ ಶಿವಮೊಗ್ಗ ಜಿಲ್ಲೆಗೆ ಆಗಮಿಸಿತು.
ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸಿದ ರಥವನ್ನು ತರೀಕೆರೆ ತಾಲ್ಲೂಕು ಎಂ.ಸಿ. ಹಳ್ಳಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ, ಭದ್ರಾವತಿ ತಾಲ್ಲೂಕು ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಎಂ. ಎಂ. ಸ್ವಾಮಿ, ತಾಲ್ಲೂಕು ಕಾರ್ಯದರ್ಶಿ ಎಚ್. ತಿಮ್ಮಪ್ಪ, ಎಂ. ಇ. ಜಗದೀಶ್, ಕೋಶಾಧ್ಯಕ್ಷರಾದ ಹಿರಿಯೂರು ಪ್ರಸನ್ನ, ಸಂಘಟನಾ ಕಾರ್ಯದರ್ಶಿಗಳಾದ ನಾಗೋಜಿರಾವ್, ಕಮಲಾಕರ್,ಪ್ರಕಾಶ್, ಕಜಾಪ ತಾಲ್ಲೂಕು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ಜಿಲ್ಲಾ ಸಮಿತಿಯ ಸೋಮಿನಕಟ್ಟಿ, ಎಸ್. ಷಣ್ಮುಖಪ್ಪ, ಕುಬೇರಪ್ಪ, ರಾಮಚಂದ್ರ, ಎಸ್ ನಾರಾಯಣ, ಡಿ. ಗಣೇಶ್, ಶ್ರೀನಿವಾಸ ನಗಲಾಪುರ, ಕವಿತಾರಾವ್, ಸುರೇಶಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ತರೀಕೆರೆ ತಾಲ್ಲೂಕು ಕಸಾಪ ಅಧ್ಯಕ್ಷರಾದ ನವೀನ್ ಚನ್ನಯ್ಯ, ಕಸಾಪ ಸಿಬ್ಬಂದಿ ಶ್ರೀನಿವಾಸ, ಕಾಶಿಂ, ವೀರೇಶ್ ನೇತೃತ್ವದಲ್ಲಿ ರಥವನ್ನು ಕನ್ನಡ ಧ್ವಜ ಹಸ್ತಾಂತರ ಮಾಡುವ ಮೂಲಕ ಜವಾಬ್ದಾರಿ ವಹಿಸಿಕೊಟ್ಟರು.
ಭದ್ರಾವತಿ ನಗರದಲ್ಲಿ ರಥದ ಮೆರವಣಿಗೆ ಜನಪದ ಕಲಾ ತಂಡಗಳ ಜೊತೆಯಲ್ಲಿ ನಡೆಯಿತು. ಕನಕಮಂಟಪದಲ್ಲಿ ನಡೆದ ವೇದಿಕೆ ಸಮಾರಂಭದಲ್ಲಿ ಶಾಸಕರಾದ ಬಿ. ಕೆ. ಸಂಗಮೇಶ್ವರ ದೀಪಬೆಳಗಿಸಿ ಉದ್ಘಾಟಿಸಿದರು.
ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪ್ರಾಸ್ತಾವಿಕ ಮಾತುಗಳನ್ನು ಆಡಿದರು.
ನಗರಸಭೆ ಅಧ್ಯಕ್ಷರಾದ ಅನುಸುಧಾ ಮೋಹನ್, ಉಪಾಧ್ಯಕ್ಷರಾದ ಚನ್ನಪ್ಪ, ಆಯುಕ್ತರಾದ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಕೆ. ನಾಗೇಂದ್ರಪ್ಪ, ಉಪ ತಹಶಿಲ್ದಾರ್ ರಂಗಮ್ಮ, ಮಾಜಿ ನಗರಸಭಾ ಅಧ್ಯಕ್ಷ ಬಿ. ಕೆ. ಮೋಹನ್, ಕಸಂಇಲಾಖೆಯ ಉಮೇಶ್, ರಥ ನಿರ್ಮಿಸಿದ್ದ ಖಾಸಿಂಸಾಬ್, ವಿದ್ಯಾರ್ಥಿಗಳು, ಸಾರ್ವಜನಿಕರು, ಪತ್ರಕರ್ತರು, ಕನ್ನಡ ಪರ ಸಂಘಟನೆಯ ಪ್ರಮುಖರು, ಸಾಹಿತಿಗಳು ಭಾಗವಹಿಸಿದ್ದರು.
ತಾ.ಕಸಾಪ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ ಸ್ವಾಗತಿಸಿದರು. ಮಹಿಳಾ ತಂಡದವರು ನಾಡಗೀತೆ, ರೈತಗೀತೆ ಹಾಡಿದರು, ಜಿಲ್ಲಾ ಕಾರ್ಯದರ್ಶಿ ಎಂ. ಎಂ. ಸ್ವಾಮಿ ವಂದಿಸಿದರು.
ಊಟದ ನಂತರ ಮೆರವಣಿಗೆ ನಗರದಲ್ಲಿ ಸಂಚರಿಸಿ ದಾವಣಗೆರೆ ಜಿಲ್ಲೆಯತ್ತ ತೆರಳಿತು. ಕೂಡ್ಲಿಗೆರೆಯಲ್ಲಿ ಹೋಬಳಿ ಸಮಿತಿಯ ಕೆ. ಎಸ್. ರೇವಪ್ಪ, ಕಾರ್ಯದರ್ಶಿ ಚನ್ನಪ್ಪ, ಧನಿಕುಮಾರ್, ಪ್ರಕಾಶ್ ಸೇರಿದಂತೆ ಗ್ರಾಮದ ಪ್ರಮುಖರು ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆಮಾಡಿ ಬೀಳ್ಕೊಟ್ಟರು.
ಚನ್ನಗಿರಿ ತಾಲ್ಲೂಕು ಜೋಳದಾಳು ಗ್ರಾಮದ ವರೆಗೆ ಶಿವಮೊಗ್ಗ ಜಿಲ್ಲಾ ಕಸಾಪ ತಂಡ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾಅಧ್ಯಕ್ಷರಾದ ವಾಮದೇವಪ್ಪ, ಹಿಂದಿನ ಅಧ್ಯಕ್ಷರಾದ ಉಜ್ಜಿನಪ್ಪ ಸೇರಿದಂತೆ ತಾಲ್ಲೂಕು ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.