- Advertisement -
ಭೀಮ ಅವಾವಾಸ್ಯೆ.
ದೀಪ ಜ್ಯೋತಿಯ ಹಬ್ಬ
ಭೀಮ ಅಮಾವಾಸ್ಯೆಯ ಹಬ್ಬ
ಆಯುವೃದ್ಧಿಗೆ ವರ ಬೇಡುವ ಹಬ್ಬ
ಪಾರ್ವತಿ ಪರಮೇಶ್ವರರ ಪ್ರೀತಿಗೊಳಿಸುವ ಹಬ್ಬ
ಕನ್ಯೆ ನಾರಿಯರಾದಿ ದೀಪ ಬೆಳಗಿಸಿ
ದಾರ ಗಂಟುಗಳ್ಹಾಕಿ ಪೂಜಿಸಿ ಭಂಡಾರವಡೆವ ಹಬ್ಬ
ದರಿದ್ರತೆಯ ನೀಗಿಸಿಕೊಳ್ಳುವ ಹಬ್ಬ
ಸಾಲು ಹಬ್ಬಗಳಿಗೆ ಮಂಗಲ ಕೇಳುವ ಹಬ್ಬ
- Advertisement -
ಭಕ್ತಿಯಲ್ಲಿ ಪೂಜಿಸಿ ಪತಿ ಆಯುವೃದ್ಧಿಗೆ
ಮನೆತನದ ಅಭಿವೃದ್ಧಿಗೆ ಲೋಕದಿ
ಪತಿವೃತೆಯ ವೃತ ಮಹಿಮೆಯ
ತಿಳಿದು ತಿಳಿಸಿ ಶುಭ ಕೋರುವ ಹಬ್ಬ.
ರಾಧಾ ಶಾಮರಾವ.
ಧಾರವಾಡ