spot_img
spot_img

ಕವನ: ನಮ್ಮ ಕರುನಾಡು

Must Read

spot_img

ನಮ್ಮ ಕರುನಾಡು

ರಸ ಋಷಿಗಳಿರುವ ಬೀಡು

ಕವಿ ಪುಂಗವರ ಈ ನಾಡು

ದೈವ ಲೀಲೆಗಳ  ನೆಲೆಬೀಡು

ನಮ್ಮ ಹೆಮ್ಮೆಯ ಕರುನಾಡು

ಜಗದಲಿ ಭಾರತ ದೇಶ ಚಂದ

ಭಾರತದಲಿ ಕರುನಾಡು ಅಂದ

ಕರುನಾಡಲಿ ಕರಿಮಣ್ಣು ಚಂದ

ಕರಿಮಣ್ಣಲಿ ಶ್ರೀಗಂಧ ಅಂದ

ಸಹನಾ ಮೂರ್ತಿಗಳ ತವರೂರು

ಶೌರ್ಯ ಪರಾಕ್ರಮದಿ  ನಿಸ್ಸೀಮರು

ಶಾಂತಿ ತಾಳ್ಮೆಯಲಿ ಪ್ರಖ್ಯಾತರು 

ಎದುರಾಳಿಗಳ ಸದೆ ಬಡೆಯುವರು

ಜಾತಿ ಭೇದವ ಮರೆತು ಹಾಡುವರು

ಮತ ಪಂಥ ತೊರೆದು ನರ್ತಿಸುವರು

ಕಣ್ ಕಣ್ ಬಿಟ್ಟು ನೋಡುವರಣ್ಣ

ರಾಜ್ಯೋತ್ಸವದ ಸವಿ ಸೊಬಗಣ್ಣ

ತಂಟೆ ತಕರಾರು ತಗೆದಿರಾದರೆ

ಕನ್ನಡ ಕಲಿಗಳು ಸುಮ್ಮನಿರುವರೆ

ಬೆನ್ನಟ್ಟಿ ಬೆಂಡಾಗಿಸದೇ  ಬಿಡರು

ಕರಿಮಣ್ಣಿನ ವೀರ ಸುಪುತ್ರರು

೬೭ ರ ರಾಜ್ಯೋತ್ಸವ ಸಂಭ್ರಮವು

ಇಲ್ಲಿ ಜನಿಸಿ ಧನ್ಯರಾದೆವು ನಾವು

ಭುವನೇಶ್ವರಿಗೊಂದು ನಮನವು

ಆಶೀರ್ವದಿಸು ನೀ  ಸದಾಕಾಲವು


ರಚನೆ ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!