- Advertisement -
ಖದಿರಾ ದಶಮೂಲ ಅರಿಷ್ಟದಲ್ಲಿ ಉಪಯೋಗಿಸುವ ಒಂದು ಮೂಲ.
ದೈವಿಕವಾಗಿ ಯಜ್ಞದಲ್ಲಿ ಉಪಯೋಗ.
ಗಿಡದಲ್ಲಿ ಮುಳ್ಳು ಹೊಂದಿದ್ದರು ತುಂಬಾ ಔಷಧೀಯ ಗುಣವನ್ನೂ ಹೊಂದಿದೆ.
- Advertisement -
ಇದರ ಸೊಪ್ಪು ಚಕ್ಕೆ ಕಾಯಿ ಇವುಗಳು ಹೆಚ್ಚು ಔಷಧಿಯ ರೂಪದಲ್ಲಿ ಉಪಯುಕ್ತ.
- ಚಕ್ಕೆಯನ್ನು ಕುದಿಸಿ ಕಷಾಯ ಮಾಡಿ ಬೆಲ್ಲ ಹಾಕಿ ಕುಡಿಯುವುದರಿಂದ ಕೆಮ್ಮು ನಿವಾರಣೆ ಆಗುತ್ತದೆ.
- ಚಕ್ಕೆಯನ್ನು ಎಣ್ಣೆಯಲ್ಲಿ ಕುದಿಸಿ ಹಚ್ಚುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.
- ಚಕ್ಕೆಯ ಕಷಾಯದಿಂದ ಗಾಯವನ್ನು ತೊಳೆಯುವುದರಿಂದ ಗಾಯ ಬೇಗನೆ ಒಣಗುತ್ತದೆ.
- ಕಾಯಿಯನ್ನು ಒಣಗಿಸಿ ಪುಡಿ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲು ನೋವು ಗುಣವಾಗುತ್ತದೆ ಮತ್ತು ಹಲ್ಲಿನ ಸಮಸ್ಯೆಗಳು ವಸಡಿನ ಸಮಸ್ಯೆಗಳು ಗುಣವಾಗುತ್ತದೆ.
- ಚಕ್ಕೆಯನ್ನು ಕಷಾಯ ಮಾಡಿ ಗಂಡುಷ ಎಂದರೆ ಬಾಯಿ ಮುಕ್ಕುಳಿಸುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.
- ನಿಯಮಿತವಾಗಿ ಇದರ ಕಷಾಯ ಕುಡಿಯುವುದರಿಂದ ಬೊಜ್ಜು ಕರಗುತ್ತದೆ.
- ಜೀರಿಗೆ ಮತ್ತು ಸೊಪ್ಪಿನ ಕಷಾಯ ತಯಾರಿಸಿ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ.
- ಸೊಪ್ಪನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಗಾಯವಾದ ತಕ್ಷಣ ಗಾಯಕ್ಕೆ ಉಪಯೋಗಿಸುವುದರಿಂದ ರಕ್ತಸ್ರಾವ ನಿಲ್ಲುತ್ತದೆ.
- ಸೊಪ್ಪನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಸೋಸಿ ಮಕ್ಕಳಿಗೆ ಹಚ್ಚುವುದರಿಂದ ಚರ್ಮ ಹೊಳಪು ಬರುತ್ತದೆ ಮತ್ತು ಗುಳ್ಳೆಗಳು ಗುಣವಾಗುತ್ತದೆ.
- ಎಲೆಯ ಪೇಸ್ಟ್ ಗೆ ಅರಿಶಿನ ಸೇರಿಸಿ ಹಚ್ಚುವುದರಿಂದ ಮೊಡವೆ ಗುಣವಾಗುತ್ತದೆ.
- ಕಾಯಿಯ ಕಷಾಯ ಮಾಡಿ ರುಚಿಗೆ ನಿಂಬೆರಸ ಉಪ್ಪು ಹಾಕಿ ಸೇವಿಸುವುದರಿಂದ ಗಂಟಲು ನೋವು ಗುಣವಾಗುತ್ತದೆ.
- ಖದಿರದ ಯಾವುದೇ ಮೂಲವನ್ನು ಉಪಯೋಗಿಸಿದಾಗ ಹಾಲು ಒಂದು ಗಂಟೆ ಕುಡಿಯುವಂತಿಲ್ಲ.
ಸುಮನಾ ಮಳಲಗದ್ದೆ 9980182883.