Homeಸುದ್ದಿಗಳುಕಮಲ ಬಿಟ್ಟು ತೆನೆ ಹಿಡಿದ ಖೂಬಾ

ಕಮಲ ಬಿಟ್ಟು ತೆನೆ ಹಿಡಿದ ಖೂಬಾ

ಬೀದರ: ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾರಣದಿಂದ ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತೆ ಜೆಡಿಎಸ್ ಪಕ್ಷದತ್ತ ವಾಲಿದ್ದಾರೆ.

ಈ ಮುಂಚೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾತು ಕೇಳಿ ಬಿಜೆಪಿ ಸೇರಿದ್ದರು ಆದರೆ ಅಸಮಾಧಾನದಿಂದಾಗಿ ಕಮಲದ ಹೂವು ಕೆಳಗೆ ಇಳಿಸಿ ಜೆಡಿಎಸ್ ನ ತೆನೆ ಕಡೆ ಮುಖ ಮಾಡಿದ್ದಾರೆ.

ಚನ್ನಪಟ್ಟಣಕ್ಕೆ ತೆರಳಿ  ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಮಲ್ಲಿಕಾರ್ಜುನ ಖೂಬಾ ಅವರಿಗೆ ಶಾಲು ಹೊದಿಸಿ ಜೆಡಿಎಸ್ ಸೇರುವ ತಮ್ಮ ಇಂಗಿತ ವ್ಯಕ್ತಪಡಿಸಿದರು

ಬಸವಕಲ್ಯಾಣದಿಂದ ಮತ್ತೆ ತೆನೆ ಹೊತ್ತ ಮಹಿಳೆ ಚಿನ್ಹೆಯಿಂದ ಮಲ್ಲಿಕಾರ್ಜುನ ಖೂಬಾ ಸ್ಪರ್ಧಿಸಲು ಕುಮಾರಸ್ವಾಮಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

close
error: Content is protected !!
Join WhatsApp Group