spot_img
spot_img

ಬೆಳಗಾವಿ ಜಿಲ್ಲೆಯ ಒಂದೇ ಮನೆಯ ಇಬ್ಬರು ಪಿ ಎಸ್ ಐ ಹುದ್ದೆಗೆ ಆಯ್ಕೆ

Must Read

spot_img
- Advertisement -

ಮೂಡಲಗಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಶಿವಾನಂದ ಬೆನ್ನಳ್ಳಿ ಮತ್ತು ಅವರ ಸಹೋದರನ ಮಗಳು ಶಿಲ್ಪಾ ಪ್ರವೀಣ ಬೆನ್ನಳ್ಳಿ ಇವರು ಪೋಲಿಸ್ ಇಲಾಖೆಯಲ್ಲಿ PSI ಆಗಿ ಆಯ್ಕೆ ಆಗಿದ್ದಾರೆ.

ಇವರು ಮೂಲತಃ ಬೆಳಗಾವಿ ಜಿಲ್ಲೆಯ ಇಟ್ನಾಳ ಗ್ರಾಮದವರಾಗಿರುತ್ತಾರೆ.ವಿಶೇಷವೆಂದರೆ ಈ ಇಬ್ಬರೂ ಪರೀಕ್ಷೆಯಲ್ಲಿ ರಾಜ್ಯಕ್ಕೆ ಆರನೇ RANK ಪಡೆದಿದ್ದು ಇಡೀ ಗ್ರಾಮವೇ ಹೆಮ್ಮೆಪಡುವಂತಾಗಿದೆ.

ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಿವಾನಂದ ಅವರು, ನಾವು ಸಾಧನೆ ಮಾಡಬೇಕೆನ್ನುವ ಆಸೆ ತಮ್ಮ ತಂದೆ – ತಾಯಿಗಳದ್ದಾಗಿತ್ತು. ಇದಕ್ಕೆ ಸಂಪೂರ್ಣ ಸಹಕಾರ ನೀಡಿದವರು ನಮ್ಮ ಹಿರಿಯರಾದ ಮಹಾಂತೇಶ ಬೆನ್ನಳ್ಳಿ, ತೇರದಾಳದ ನಮ್ಮ ಮಾವ, ಅತ್ತೆ ಹಾಗೂ ನಾಗನೂರಿನ ಸಕ್ರೆಪ್ಪಗೋಳ ಕುಟುಂಬ, ಅದೇ ರೀತಿ ಧಾರವಾಡದ ವಿದ್ಯಾಪೋಷಕ ಎನ್. ಜಿ. ಓ. ಸಂಸ್ಥೆ ಈ ಸಂಸ್ಥೆಯ ಲಾಭವನ್ನು ಎಲ್ಲ ಬಡ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆನ್ನುವ ಆಸೆ ನನ್ನದು ಎಂದರು.

- Advertisement -

ಮಹಿಳಾ ಕೋಟಾದಲ್ಲಿ ಪಿಎಸ್ಐ ಆಗಿ ಅಯ್ಕೆಯಾದ ಕು. ಶಿಲ್ಪಾ ಅವರು, ಸತತ ಪ್ರಯತ್ನವೇ ಸಾಧನೆಯ ರಹಸ್ಯ. ತಾಳಿದವನು ಬಾಳಿಯಾನು ಎಂಬ ಗಾದೆಗಳೇ ನನ್ನ ಸ್ಪರ್ಧಾ ಜೀವನದ ಸಾಲುಗಳು. ಗಂಡು – ಹೆಣ್ಣು ತಾರತಮ್ಯವಿಲ್ಲದ ಕುಟುಂಬ ನನ್ನದು ಅವರು ಹೆಮ್ಮೆ ಪಡುವ ಮಗಳಾಗಬೇಕೆಂದು ನನ್ನ ಧ್ಯೇಯ ತಂದೆ ತಾಯಿ ಚಿಕ್ಕಪ್ಪ ಮತ್ತು ಅಣ್ಣನ ಸಹಕಾರವೇ ಈ ಸಾಧನೆಯ ಮೂಲ ಇದರ ಜೊತೆಗೆ ಗುರುಗಳಾಗಿ ಮಾಗ೯ದಶ೯ನ ನೀಡಿದವರು ಶಿವಾನಂದ ಮತ್ತು ಪ್ರಶಾಂತ ಅವರು ಎಂದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group