ಮೂಡಲಗಿ : ಇಲ್ಲಿನ ತಹಶೀಲ್ದಾರರ ಕಛೇರಿ ಆವರಣದಲ್ಲಿಯ ಕಟ್ಟಡದಲ್ಲಿ ಕಾರ್ಮಿಕ ಇಲಾಖೆ ನಿರೀಕ್ಷಕರ ಕಛೇರಿಯನ್ನು ಪೂಜೆ ಸಲ್ಲಿಸಿ ಶುಕ್ರವಾರ ಪ್ರಾರಂಭ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಪಾಂಡುರಂಗ ಮಾವರಕರ ಮಾತನಾಡಿ,ಕಾರ್ಮಿಕರ ಹಿತದೃಷ್ಟಿಯಿಂದ ಕಚೇರಿ ಪ್ರಾರಂಭಿಸಲಾಗಿದ್ದು ಕುಂದು ಕೊರತೆ ನಿವಾರಿಸಿಕೊಳ್ಳಲು ಈ ಕಚೇರಿಯನ್ನು ಪ್ರಾರಂಭಿಸಲಾಗಿದೆ ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಪೋಳ ಮಾತನಾಡಿ, ಬಹು ಬೇಡಿಕೆಯಾಗಿದ್ದ ಈ ಕಚೇರಿ ಪ್ರಾರಂಭವಾಗಿದ್ದು ಕಾರ್ಮಿಕರಿಗೆ ಖುಷಿ ನೀಡಿದೆ ತಾಲೂಕಿನ ಎಲ್ಲ ಕಾರ್ಮಿಕರ ಕೆಲಸ ಕಾರ್ಯಗಳಿಗೆ ಕಚೇರಿ ಅನುಕೂಲವಾಗಲಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ, ಉಪ ತಹಶೀಲ್ದಾರ ಎಸ್.ಎ.ಬಬಲಿ, ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಈರಪ್ಪ ಢವಳೇಶ್ವರ, ಭಗವಂತ ಉಪ್ಪಾರ, ರುದ್ರಮನಿ ಹಿರೇಮಠ ಹಾಗೂ ಅನೇಕ ಕಾರ್ಮಿಕರು, ಮತ್ತಿತರರು ಇದ್ದರು.