- Advertisement -
ಬೀದರ – ಕಲ್ಯಾಣ ಕರ್ನಾಟಕ ಅಭಿವೃದ್ಧಿ ಬಗ್ಗೆ ನಡೆದ ಮೊದಲ ಸಭೆಗೇ ಬಸವಕಲ್ಯಾಣದ ನೂತನ ಶಾಸಕ ಶರಣು ಸಲಗರ ಗೈರು ಹಾಜರಾಗಿದ್ದರು.
ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಜತೆ ನಡೆದ ವರ್ಚುಲ್ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಶಾಸಕರು ಭಾಗಿಯಾಗಿದ್ದರು ಆದರೆ ಶಾಸಕ ಶರಣು ಸಲಗರ ಭಾಗಿಯಾಗಿರಲಿಲ್ಲ. ಅವರು ನೂತನ ಶಾಸಕರಾದ ಬಳಿಕ ಮೊದಲ ಬಾರಿ ನಡೆದ ಸಭೆ ಇದು ಆದರ ಸಲಗರ ಅವರು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆನ್ನಲಾಗಿದ್ದು ಸಂಪುಟ ದರ್ಜೆಗೆ ಸೇರಲು ಕಸರತ್ತು ನಡೆಸಿದ್ದಾರೆಯಾ ಎಂಬ ಪ್ರಶ್ನೆಗಳು ಮೂಡಿವೆ. ಇದಕ್ಕೆ ಪುಷ್ಠಿ ಕೊಡುವಂತೆ ಸಲಗರ ಅವರು ನೂತನ ಕೇಂದ್ರ ಸಚಿವ ಭಗವಂತ್ ಖೂಬಾ ಅವರ ಭೇಟಿಯಾಗಿದ್ದು ಕುತೂಹಲ ಮೂಡಿಸಿದೆ.