spot_img
spot_img

‘ವಾಹನಗಳ ಬಳಕೆಯು ದೇಶದ ಅಭಿವೃದ್ಧಿಪರವಾಗಿರಲಿ’ – ಕು.ಪ್ರಿಯಾಂಕಾ ಜಾರಕಿಹೊಳಿ

Must Read

- Advertisement -

ಮೂಡಲಗಿ: ‘ದೇಶದ ವೇಗದ ಅಭಿವೃದ್ಧಿಯಲ್ಲಿ ಇಂಧನ ಆಧಾರಿತ ವಾಹನಗಳ ಪಾತ್ರ ಮಹತ್ವದ್ದಾಗಿದ್ದು, ವಾಹನಗಳ ಬಳಕೆಯು ದೇಶದ ಅಭಿವೃದ್ಧಿ ಪರವಾಗಿರಲಿ’ ಎಂದು ಪ್ರಿಯಾಂಕಾ ಸತೀಶ ಜಾರಕಿಹೊಳಿ ಅವರು ಹೇಳಿದರು.

ತಾಲ್ಲೂಕಿನ ನಾಗನೂರ ಗ್ರಾಮದ ಮನ್ನಿಕೇರಿ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಕಾಪೋರೇಶನ್ ದವರು ಏರ್ಪಡಿಸಿದ್ದ ಗ್ರಾಹಕರ ಸಮಾವೇಶ ಮತ್ತು ಉತ್ತಮ ಗ್ರಾಹಕ ಪ್ರಶಸ್ತಿಗಳ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂಧನ ಸಂಪನ್ಮೂಲವು ದೇಶದ ಬಹುದೊಡ್ಡ ಶಕ್ತಿಯಾಗಿದ್ದು, ಅದು ಸದ್ಬಳಕೆಯಾಗಬೇಕು ಎಂದರು.

ಗ್ರಾಹಕರ ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದು ಮನ್ನಿಕೇರಿ ಪೆಟ್ರೋಲಿಯಂದವರು ಗ್ರಾಹಕರಿಂದ ಕಾಯ್ದುಕೊಂಡಿರುವ ವಿಶ್ವಾಸ ಮುಖ್ಯ ಕಾರಣವಾಗಿದೆ. ಇದು ಇನ್ನೂ ಉನ್ನತವಾಗಿ ಬೆಳೆಯಲಿ ಎಂದು ಹೇಳಿದರು.

- Advertisement -

ಅತಿಥಿಗಳಾಗಿ ಸವೋತ್ತಮ ಜಾರಕಿಹೊಳಿ, ಬಸಗೌಡ ಪಾಟೀಲ, ಮನ್ನಿಕೇರಿ ಪೆಟ್ರೋಲಿಯಂ ಮಾಲೀಕರಾದ ಪಾಂಡುರಾಂಗ ಮನ್ನಿಕೇರಿ, ಇಂಡಿಯನ್ ಆಯಿಲ್ ಕಾರ್ಪೋರೇಶನದ ಅಧಿಕಾರಿ ಜಯಂತಕುಮಾರ ಉಮಾಕಾಂತ, ವಿ. ಮುರಳಿ, ಕವಿದ್ರ ದವನ, ಸತೀಶ ಎಸ್, ಸರ್ವೋ ತೈಲ ಸಂಸ್ಥೆಯ ರಾಘವೇಂದ್ರ ಇದ್ದರು.

ಚಂದ್ರಕಾಂತ ಮೋಟೆಪ್ಪಗೋಳ ಸ್ವಾಗತಿಸಿದರು, ಎ.ಜಿ. ಕೋಳಿ ನಿರೂಪಿಸಿದರು, ಸಂತೋಷ ಕನವಳ್ಳಿ ವಂದಿಸಿದರು.

ಬಹುಮಾನಗಳ ವಿಜೇತರು: ಕಳೆದ ಜನವರಿ ತಿಂಗಳದಲ್ಲಿ ಜರುಗಿದ ಹಬ್ಬದ ಧಮಾಕಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಗ್ರಾಹಕರು. ಪ್ರಥಮ ಬಹುಮಾನ ಹೋಂಡಾ ಅಮೇಜ್ ಕಾರು ಮಾರಾಪುರದ ಮಹಾದೇವ ಧರ್ಮಟ್ಟಿ ಅವರಿಗೆ ದೊರೆಯಿತು. ದ್ವಿತೀಯ ಬಹುಮಾನ ಬಜಾಜ್ ಬೈಕ್‍ವು ವಡೇರಹಟ್ಟಿಯ ವಿಠ್ಠಲ ಕ್ಯಾಸ್ತಿ, ತೃತೀಯ ಬಹುಮಾನ ರೆಫ್ರಿಜರೇಟರ್ ನಾಗನೂರಿನ ಕೆ.ಟಿ. ಅಂಗಡಿ ಹಾಗೂ ನಾಲ್ಕನೇ ಬಹುಮಾನ ಬೈಸಿಕಲ್‍ ನಾಗನೂರದ ತುಕಾರಾಮ ಸುಣಗಾರ ಅವರಿಗೆ ಲಭಿಸಿತು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group