spot_img
spot_img

ಸದೃಢ ಭಾರತ ಕಟ್ಟೋಣ

Must Read

- Advertisement -

ಸದೃಢ ಭಾರತ ಕಟ್ಟೋಣ

ಸುತ್ತಲೂ ಸಾಂಕ್ರಾಮಿಕ ರೋಗದ ಕಗ್ಗತ್ತಲು,

ದಿನನಿತ್ಯವೂ ಸಾವುಗಳ ಆಕ್ರಂದನ ,
ಬಡವರ-ರೋಗಿಗಳ ಆಕ್ರಂದನ ,
ಶಾಲೆಯತ್ತ ತೆರಳದ ಮಕ್ಕಳು,
ಕೆಲಸಗಳ ಬಿಟ್ಟು ಜೀವದಾಸೆಗಾಗಿ
ಮನೆಯಲ್ಲಿ ಬಂಧಿಯಾದ ಶ್ರೀಸಾಮಾನ್ಯರು…..

ಯುವ ಜನರೇ , ಏತಕೆ ಆತಂಕ ?
ಕಗ್ಗತ್ತಲ ನೋಡಿ ಬೆಚ್ಚಬೇಡಿ ; ಬೆದರಬೇಡಿ ,
ನಾಳೆ ಅಭ್ಯುದಯದ ಸೂರ್ಯ ಉದಯಿಸುತ್ತಾನೆ ,
ಇಂದಿನ ಆತಂಕದ ಕಗ್ಗತ್ತಲ ನಿವಾರಿಸುತ್ತಾನೆ ,
ಆತಂಕಗಳ ತ್ಯಜಿಸಿ ,ಸುಂದರ ನಾಳೆಗಳ ನಂಬಿಕೆಯಿಡಿ…

- Advertisement -

ಭವಿಷ್ಯದ ಸಮಾಜ ನಿರ್ಮಾತೃಗಳು ನೀವು ,
ಸಮಾಜದ ಸುಭದ್ರ ಅಡಿಗಲ್ಲುಗಳು ನೀವು ,
ದುಃಖ,ಆತಂಕ,ಭಯಗಳ ಬಿಟ್ಟೇಳಿ,
ಉತ್ಸಾಹದ ಬುಗ್ಗೆಯಾಗಿ,
ನೀರಿನ ಸುಂದರ ಚಿಲುಮೆಯಂತೆ
ಸಂತಸದಿಂದ ಚಿಮ್ಮಿಬಿಡಿ..

ಭಾರತಕೊಂದು ಸುಂದರ ಇತಿಹಾಸವಿದೆ ,
ಕನಕ,ಪುರಂದರ,ಪುರಂದರದಾಸರ ಕೀರ್ತನೆಗಳ,
ಸರ್ವಜ್ಞ, ಬಸವಣ್ಣ ,ಅಕ್ಕಮಹಾದೇವಿ ವಚನಗಳ,
ಗಾಂಧೀಜಿ, ಟ್ಯಾಗೋರ್,ವಿಶ್ವೇಶ್ವರಯ್ಯ, ಕಲಾಂರ ಸಾಧನೆಗಳ
ಸುಂದರ,ಸುಭದ್ರ ,ಭವ್ಯ ಅಡಿಪಾಯವಿದೆ…

ಆರ್ಯಭಟ,ಸಿ.ವಿ.ರಾಮನ್ನರ ವೈಜ್ಞಾನಿಕ ಚಿಂತನೆ ,
ಮೈಸೂರು ಅರಸರ ಕಾಯಕತತ್ವ ,
ಪಾಟೀಲ ಪುಟ್ಟಪ್ಪ,ಅನಕೃ,,ಮನಾ ರಾಮಮೂರ್ತಿಗಳ
ಅಪ್ರತಿಮ ನಾಡಭಕ್ತಿ,ಭಾಷಾಪ್ರೇಮ
ನಿಮ್ಮನು ಉತ್ಸಾಹದ ಗಣಿಯಾಗಿ ಮಾಡಲಿ…

- Advertisement -

ಕಿತ್ತೂರು ಚೆನ್ನಮ್ಮ ,ಕೆಳದಿ ಚೆನ್ನಮ್ಮ ,
ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವರ
ಅಪ್ರತಿಮ‌ ರಾಷ್ಟ್ರಭಕ್ತಿ ನಿಮ್ಮದಾಗಲಿ,
ವ್ಯರ್ಥ ಸುತ್ತಾಟ ,ದುಶ್ಚಟಗಳಲಿ ಕಾಲಹರಣ ಕೈಬಿಡಿ,
ಕಾಯಕ ತತ್ವಕೆ ಮಹತ್ವ ಕೊಡಿ ,
ಸುಂದರ-,ಸಧೃಡ ಭಾರತವ ಕಟ್ಟೋಣ ,
ಜಾತಿ,ಮತ,ಧರ್ಮಗಳ ಮರೆತು
ಆರೋಗ್ಯಪೂರ್ಣ ಭಾರತವ‌ ರೂಪಿಸೋಣ….

(ಸ್ವಾತಂತ್ರ್ಯೋತ್ಸವದ ವಜ್ರಮಹೋತ್ಸವದ ಅಂಗವಾಗಿ ರಚಿಸಿದ ಕವನ)


ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group