ಬದುಕನ್ನು ಕಸಿದ ಕರೊನಾ
- Advertisement -
ಕಣ್ಣಿಗೆ ಕಾಣದ ಕ್ಷುದ್ರಜೀವಿಗೆ ಬಲಿಯಾದೆವಯ್ಯಾ
ಮುಖಗವಸು ಧರಿಸಿ ಅಂತರ ಕಾಯ್ದು ದೂರವಾದೆವಯ್ಯಾ
ಬಸವಪ್ರಭು, ಪ್ರಾಣಿಪಕ್ಷಿಗಳಿಗಿಲ್ಲದ ನರಕ ನಮಗೇಕಯ್ಯಾ
ಒಂದರಗಳಿಗೆ ಹಿಂದೆ ಮಾತಾಡಿದವ ಈಗ ಇಲ್ಲವಯ್ಯಾ
ದೇಹ ಭಾವ ಎಲ್ಲವೂ ದೂರ ದೂರವಯ್ಯಾ
ಹಿಂದೆಂದೂ ಕಾಣದ ಲಾಭಕೋರರನ್ನು ಕಾಣುತ್ತಿರುವೆವಯ್ಯಾ
ಮನುಷ್ಯತ್ವವನ್ನು ವಸ್ತುಸಂಗ್ರಹಾಲಯದಲ್ಲಿ ಹುಡುಕುವಂತಾಯಿತಯ್ಯಾ
ಅನುಮತಿ ಪಡೆದು ಮದುವೆಯಾದವರು ವಿಧವೆ-ವಿದುರರಾದರಯ್ಯಾ
ಮಾಸ್ಕ,ಸ್ಯಾನಿಟೈಜರ್,ಸಾಮಾಜಿಕ ಅಂತರ ವ್ಯಾಕ್ಸಿನ್ ಇವೇ ಈಗಿನ ಮಂತ್ರಗಳಯ್ಯಾ
ಸರಕಾರವೆಂದರೇನಯ್ಯಾ? ನಾವೇ ಅಲ್ಲವೇನಯ್ಯಾ
ಮೂರನೆಯ ಅಲೆ ಬೇಡವಯ್ಯಾ;ಮಕ್ಕಳನ್ನು ರಕ್ಷಿಸಯ್ಯಾ
ಕೂಡಲಸಂಗಮದೇವ, ನೀನು ಸೃಜಿಸಿದ ಕರೋನಾ ಹಿಂಪಡೆಯಯ್ಯಾ.
ಶಂಕ್ರಪ್ಪ ಚವಡಾಪೂರ
ನಿವೃತ್ತ ಉಪನ್ಯಾಸಕರು