Homeಸುದ್ದಿಗಳುಕಲ್ಲೋಳಿ ಮಹಾಲಕ್ಷ್ಮೀ 3ನೇ ಶಾಖೆ ಯಾದವಾಡದಲ್ಲಿ 4 ರಂದು ಪ್ರಾರಂಭ

ಕಲ್ಲೋಳಿ ಮಹಾಲಕ್ಷ್ಮೀ 3ನೇ ಶಾಖೆ ಯಾದವಾಡದಲ್ಲಿ 4 ರಂದು ಪ್ರಾರಂಭ

ಮೂಡಲಗಿ:ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.,ಕಲ್ಲೋಳಿ ಇದರ 3 ನೇ ಶಾಖೆ ಯಾದವಾಡ ಪಟ್ಟಣದಲ್ಲಿ ಅಕ್ಟೋಬರ್-4 ರಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭಗೊಳ್ಳಲಿದೆ.

ಪೂಜ್ಯ ಡಾ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಬಾಗೋಜಿಕೊಪ್ಪ ಪಟ್ಟದ್ದೇವರು ಸಾನ್ನಿಧ್ಯ ವಹಿಸಲಿದ್ದಾರೆ.

ಸಂಸ್ಥಾಪಕ ಅಧ್ಯಕ್ಷ, ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಅವರ ಅಧ್ಯಕ್ಷತೆಯಲ್ಲಿ,ಸಹಕಾರಿ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ ಸೇರಿದಂತೆ ಅನೇಕ ಸಹಕಾರಿಗಳು, ನಿರ್ದೇಶಕಕರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಸಹಕಾರಿಯ ಹಿರಿಯ ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group