ಬೈಲಹೊಂಗಲ – ಇಲ್ಲಿಯ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಸಂಸ್ಥೆಯವರು ಕೊರೋನಾ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಮಾಸ್ಕ್ ಹಾಗು ಸ್ಯಾನಿಟೈಸರ್ ವಿತರಿಸಿದರು.
ಪಟ್ಟಣದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿರುವ ಬೈಲಹೊಂಗಲ ಪ್ರೆಸ್ ಕ್ಲಬ್ ಕಾರ್ಯಾಲಯದಲ್ಲಿ ಶುಕ್ರವಾರದಂದು ಸಂಸ್ಥೆಯವರು ಪತ್ರಕರ್ತರ ಹಿತದೃಷ್ಟಿಯಿಂದ ಸ್ಥಳೀಯ ಪತ್ರಕರ್ತರಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಿಸಿದರು.
ಸಂಸ್ಥೆಯ ಏರಿಯಾ ಮ್ಯಾನೇಜರ ಮಂಜಪ್ಪ ನಡುವಿನಮನಿ ಬ್ಯಾಂಕ್ ಮ್ಯಾನೇಜರ ಮಹೇಶ ಕಾಡಾಪುರೆ, ಅಡಿಟ್ ಡಿಪಾರ್ಟ್ಮೆಂಟಿನ ವಿ ಕೆ ಶಿವಕುಮಾರ, ಕೆನರಾ ಮ್ಯಾನೇಜರ ಸಂದೀಪ ಖಾತೆದಾರ ಅವರುಗಳು ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಹಾಂತೇಶ ತುರಮರಿ ನೇತೃತ್ವದಲ್ಲಿ ಎಲ್ಲಾ ಪತ್ರಕರ್ತರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು.
ಪತ್ರಕರ್ತರಾದ ಮಹಾಂತೇಶ ರೇಶ್ಮಿ, ಉದಯ ಕೊಳೇಕರ, ರಾಜು ಬಡಿಗೇರ, ಮಹಾಂತೇಶ ರಾಜಗೋಳಿ ಉಮೇಶ ಹಿರೇಮಠ, ಕುಮಾರ ರೇಶ್ಮಿ, ಅಭಿಷೇಕ ಗಾಡದ,ಬಸವರಾಜ ದೊಡಮನಿ ನಾಗವೇಣಿ ಹುಲಿಕೇರಿ, ಈಶ್ವರ ಶಿಲ್ಲೇದಾರ ಇನ್ನುಳಿದ ಪತ್ರಕರ್ತರು ಉಪಸ್ಥಿತರಿದ್ದರು.