spot_img
spot_img

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

Must Read

spot_img
- Advertisement -

 

ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ
ಆ ಪ್ರಶ್ನೆಗುತ್ತರವ ಹೀಗೆ ಹೇಳು
ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ
ಎಲ್ಲರವ ನಾನೆನ್ನು‌- ಎಮ್ಮೆತಮ್ಮ

ಶಬ್ಧಾರ್ಥ
ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು

- Advertisement -

ತಾತ್ಪರ್ಯ
ಜನಗಳು ನಿನ್ನ ಕುಲ‌ ಯಾವುದು? ಜಾತಿ ಯಾವುದು ? ಮತ ಯಾವುದು? ಪಂಥ ಯಾವುದು‌? ಧರ್ಮ ಯಾವುದು‌ ? ಎಂದು ಕೇಳಿದರೆ ನಾನಿಂಥ ಕುಲಜಾತಿಯವನು, ಮತಪಂಥದವನು, ಧರ್ಮದವನು ಎಂದು ಹೇಳಬೇಡ. ನಾನು‌ ಏಸುಕ್ರಿಸ್ತನಿಗೆ ಸೇರಿದವನು, ಕೃಷ್ಣನಿಗೆ ಸೇರಿದವನು, ಬುದ್ಧನಿಗೆ ಸೇರಿದವನು, ಬಸವಣ್ಣನಿಗೆ ಸೇರಿದವನು ಎಂದು ಹೇಳಬೇಕು. ಹುಟ್ಟಿನಿಂದ ಕುಲಜಾತಿ ಬರುವುದಿಲ್ಲ‌. ನಾವು ಮಾಡುವ ಕಾಯಕದಿಂದ ಕುಲಜಾತಿಗಳು ಬರುತ್ತವೆ. ಹಾಗೆ ಹುಟ್ಟಿನಿಂದ‌ ಮತಪಂಥ ಧರ್ಮಗಳು ಬರುವುದಿಲ್ಲ. ನಾವು ಆಚರಿಸುವ ಮತಪಂಥ ಧರ್ಮಗಳಿಂದ ಬರುತ್ತವೆ. ಆದರೆ ನಾವು‌ ವಿಶ್ವಮಾನವರಾಗಿ ವಿಶ್ವಕುಟುಂಬಿಗಾಳಾಗಿ ಬದಕಬೇಕಾದರೆ ಕ್ರಿಸ್ತ, ಕೃಷ್ಣ, ಬುದ್ಧ, ಬಸವ ಮುಂತಾದ ಎಲ್ಲ‌ ಮಹಾತ್ಮರು ನಮ್ಮವರೆಂದು ಗೌರವಿಸಬೇಕು. ಅವರು ಎಲ್ಲ‌ಮಾನವರಿಗಾಗಿ‌ ತತ್ತ್ವಗಳನ್ನು ಬೋಧಿಸಿದ್ದಾರೆ. ಜಗತ್ತಿನಲ್ಲಿ‌ ಬಂದ ಮೇಲೆ ಸಂಕುಚಿತ ಭಾವನೆ
ಬಿಟ್ಟು ವಿಶಾಲ ಮನದವನಾಗಬೇಕು. ನಾನು‌ ಈ ಜಗತ್ತಿಗೆ
ಸೇರಿದವನು ಎಂದು ಭಾವಿಸಿ ಸಹನೆ, ಸಹಕಾರ, ಸೌಹಾರ್ದ,
ಸಹಬಾಳ್ವೆ, ಸಮಾನತೆ, ಸಹೋದರತ್ವದಿಂದ ಬದುಕಿ ಬಾಳಿ
ಎಲ್ಲರೊಳಗೊಂದಾಗಬೇಕು. ಎಲ್ಲ‌ ಜನರನ್ನು ಪ್ರೀತಿಸಿ
ಸುಖಶಾಂತಿಸಂತೋಷದಿಂದ ಬಾಳಬೇಕು‌ ಮತ್ತು‌ ಇತರರನ್ನು
ಸುಖಶಾಂತಿನೆಮ್ಮದಿಯಿಂದ ಬಾಳಲು ಬಿಡಬೇಕು.

ರಚನೆ ಮತ್ತ ವಿವರಣೆ
ಎನ್.ಶರಣಪ್ಪ‌ ಮೆಟ್ರಿ
ಮೊ: 9449030990

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group