spot_img
spot_img

ಕನ್ನಡದ ಕಟ್ಟಾಳು ಡೆಪ್ಯೂಟಿ ಚೆನ್ನಬಸಪ್ಪನವರ ಪುತ್ಥಳಿಗೆ ಉಸ್ತುವಾರಿ ಸಚಿವರಿಂದ ಪುಷ್ಪನಮನ

Must Read

- Advertisement -

ಧಾರವಾಡ: ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕಾಗಿ ಈಗ್ಗೆ ಸುಮಾರು ೧೭೦ ವರ್ಷಗಳ ಹಿಂದೆಯೇ ಧ್ವನಿ ಎತ್ತಿ ನಿರಂತರ ಶ್ರಮಿಸಿ ತಮ್ಮ ಒಟ್ಟು ಬದುಕನ್ನೇ ಸಮರ್ಪಣೆ ಮಾಡಿ ಕೀರ್ತಿಶೇಷರಾಗಿರುವ ಕನ್ನಡದ ಕಟ್ಟಾಳು, ಕನ್ನಡದ ಶಕಪುರುಷ ಡೆಪ್ಯೂಟಿ ಚೆನ್ನಬಸಪ್ಪನವರ ಪುತ್ಥಳಿಗೆ ೭೩ನೇ ಪ್ರಜಾರಾಜ್ಯೋತ್ಸವದ ಸಂದರ್ಭದಲ್ಲಿ ಬುಧವಾರ ಜಿಲ್ಲಾ ನೂತನ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ರಾಜ್ಯ ಸರಕಾರದ ಪರವಾಗಿ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.

ಜಿಲ್ಲೆಯ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ‍್ದೇಶಕಿ ಎನ್.ಕೆ. ಸಾವಕಾರ ಈ ಸಂದರ್ಭದಲ್ಲಿ ಮಾತನಾಡಿ, ಡಯಟ್ ಕಳೆದ ೧೫೬ ವರ್ಷಗಳಿಂದ ಪ್ರಕಟಿಸುತ್ತಿರುವ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಂಚಿಕೆಗಳನ್ನು ಸಚಿವ ಹಾಲಪ್ಪ ಅವರಿಗೆ ನೀಡಿದರು. ಡಯಟ್ ಹಿರಿಯ ಉಪನ್ಯಾಸಕರುಗಳಾದ ವೈ.ಬಿ. ಬಾದವಾಡಗಿ, ಜಯಶ್ರೀ ಕಾರೇಕರ, ಪಾರ‍್ವತಿ ವಸ್ತ್ರದ, ಶೋಭಾವತಿ ನಾಯ್ಕರ, ಜೆ.ಜಿ.ಸೈಯ್ಯದ, ಡಯಟ್ ಏಳೂ ವಿಭಾಗಗಳ ಉಪನ್ಯಾಸಕರು, ಲಿಪಿಕ ನೌಕರರು ಹಾಗೂ ಇತರೇ ಸಿಬ್ಬಂದಿ ವರ್ಗ ಹಾಜರಿದ್ದು ಡೆಪ್ಯೂಟಿ ಚೆನ್ನಬಸಪ್ಪನವರ ಪುತ್ಥಳಿಗೆ ತಮ್ಮ ನಮನ ಸಲ್ಲಿಸಿ ಗೌರವ ಸಮರ‍್ಪಿಸಿದರು.

‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ವಂದಿಸಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group