spot_img
spot_img

ಇನ್ನು ಮುಂದೆ ಮೂಡಲಗಿ ಸಂತೆ ಮಂಗಳವಾರ; ಮೊದಲಿನ ವೈಭವ ಬರುವುದೆ ?

Must Read

- Advertisement -

ಮೂಡಲಗಿ – ಪ್ರತಿ ರವಿವಾರ ಜರುಗುತ್ತಿದ್ದ ಮೂಡಲಗಿ ನಗರದ ವಾರದ ಸಂತೆ ಇನ್ನು ಮುಂದೆ ಮಂಗಳವಾರ ಜರುಗುತ್ತದೆ.

ಇದೇ ದಿ. ೩೧ ರಿಂದ ಮಂಗಳವಾರದ ಸಂತೆ ಆರಂಭವಾಗಲಿದೆ ಎಂಬುದಾಗಿ ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ.

ಶತಮಾನದಿಂದ ರವಿವಾರ ದಿನ ಸಂತೆ ನಡೆಸುತ್ತಿದ್ದ ಮೂಡಲಗಿ ಗ್ರಾಮದಲ್ಲಿ ” ಶನಿವಾರ ಚಿಂತಿ, ರವಿವಾರ ಸಂತಿ, ಸೋಮಾರ ನಿಶ್ಚಿಂತಿ ” ಎಂಬ ಮಾತು ಪ್ರಚಲಿತ ವಾಗಿತ್ತು. ಯಾಕೆಂದರೆ ಮೂಡಲಗಿಯ ದನಗಳ ಸಂತೆ ಕರ್ನಾಟಕ ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶದ ಲ್ಲೂ ಪ್ರಸಿದ್ಧವಾಗಿತ್ತು. ಶನಿವಾರದಿಂದಲೇ ಇಲ್ಲಿನ ಸಂತೆಯ ತಯಾರಿ ಜರುಗುತ್ತಿತ್ತು. ರವಿವಾರ ಅತ್ಯಂತ ಜನನಿಬಿಡತೆಯಿಂದ ರವಿವಾರ ಸಂತೆ ಜರುಗುತ್ತಿತ್ತು. ಸುತ್ತಮುತ್ತಲಿನ ಹಳ್ಳಿಗಳ ಜನರೆಲ್ಲ ಮೂಡಲಗಿಗೇ ಆಗಮಿಸಿ ಸಂತೆ ಮಾಡಿಕೊಂಡು ಹೋಗುತ್ತಿದ್ದರು ಹೀಗಾಗಿ ಇಲ್ಲಿಯ ಸಂತೆ ತುಂಬಾ ರಶ್ ಆಗಿರುತ್ತಿತ್ತು.

- Advertisement -

ದನಗಳ ಪೇಟೆಯಂತೂ ತುಂಬಾ ಪ್ರಸಿದ್ಧ. ನೂರಾರು ಕಿಲೋಮೀಟರ್ ದೂರದ ಊರಿನಿಂದ ದನಗಳನ್ನು ಹೊಡೆದುಕೊಂಡು ಬಂದ ಜನರು ಇಲ್ಲಿ ವ್ಯಾಪಾರ ಮುಗಿಸಿಕೊಂಡು ಹೋಗುತ್ತಿದ್ದರು. ರೈತರಿಗೂ ಕೂಡ ಮೂಡಲಗಿ ದನಗಳ ಪೇಟೆ ತುಂಬಾ ಅನುಕೂಲಕರವಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ನೆರೆಯ ಎಲ್ಲಾ ಗ್ರಾಮಗಳಲ್ಲಿ ಕೂಡ ವಾರದ ಸಂತೆ, ದನಗಳ ಸಂತೆ ನಡೆದು ಮೂಡಲಗಿ ಸಂತೆಯ ಪ್ರಾಮುಖ್ಯತೆ ಕಡಿಮೆಯಾಗಿತ್ತು. ಅಲ್ಲದೆ ಕೊರೋನಾ ಮಹಾಮಾರಿಯ ಕಾರಣ ಕಳೆದ ವರ್ಷದಿಂದ ರವಿವಾರದ ಸಂತೆ ನಡೆಯದೆ ಇಲ್ಲಿನ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆದಂತಾಗಿತ್ತು.

ಊರ ಪ್ರಮುಖರ ನಿರ್ಧಾರದಂತೆ ಇಂದು ಮೂಡಲಗಿಯ ರವಿವಾರದ ಸಂತೆ ರದ್ದಾಗಿದ್ದು ಅದು ಮಂಗಳವಾರ ನಡೆಯಲಿದೆ. ಈ ದಿನವಾದರೂ ಮೂಡಲಗಿಯ ಸಂತೆಗೆ ಮೊದಲಿನ ವೈಭವ ಮರುಕಳಿಸುವುದೇ ಎಂಬುದನ್ನು ಕಾದು ನೋಡಬೇಕು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group