Mudalagi: ಇಂದು ಇಟನಾಳದಲ್ಲಿ ಶಿವಭಜನೆ, ಸಂಗೀತ ಸಂಭ್ರಮ

Must Read

ಮೂಡಲಗಿ: ಸಮೀಪದ ಇಟನಾಳ ಗ್ರಾಮದ ಶಿವಶರಣ ಶಾಬುಜಿ ಇವರ 36ನೇ ಪುಣ್ಯಸ್ಮರಣೆ ಹಾಗೂ ಮಾತೋಶ್ರೀ ಅವಬಾಯಿ ಶಾಬುಜಿ ಐಹೊಳೆ ಅವರ 19ನೇ ಪುಣ್ಯಸ್ಮರಣೆ ಅಂಗವಾಗಿ ಜೂ. 29ರಂದು ಬೆಳಿಗ್ಗೆ 9ಕ್ಕೆ ಇಟನಾಳದಲ್ಲಿ ಶಿವಭಜನೆ ಹಾಗೂ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿರುವರು.

ಸಮಾರಂಭದ ಸಾನ್ನಿಧ್ಯವನ್ನು ಇಟನಾಳದ ಗ್ರಾಮದ ಮಾರ್ತಾಂಡ ಮಲ್ಲಯ್ಯ ಆರಾಧಕರಾದ ಸಿದ್ದೇಶ್ವರ ಶರಣರು ವಹಿಸುವರು. 

ಅಧ್ಯಕ್ಷತೆಯನ್ನು ಎಸ್.ಕೆ. ಕೊಪ್ಪದ ಹಿರಿಯ ಕಲಾವಿದ ರಾಮನಗೌಡ ವಜ್ರಮಟ್ಟಿ ವಹಿಸುವರು. 

ಮುಖ್ಯ ಅತಿಥಿಗಳಾಗಿ ಕುಳಲಿಯ ಅಪ್ಪಾಸಾಹೇಬ ಬುದ್ನಿ, ಜಮಖಂಡಿಯ ಡಾ. ಗೋಪಾಲಕೃಷ್ಣ ಹವಾಲ್ದರ್, ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ, ನಿವೃತ್ತ ಪ್ರಾಚಾರ್ಯ ಪ್ರೊ. ಎ.ಪಿ. ರಡ್ಡಿ ಭಾಗವಹಿಸುವರು ಸಮಿತಿಯ ಅಧ್ಯಕ್ಷ ಮಹಾದೇವ ಐಹೊಳೆ, ರಾಮಕೃಷ್ಣ ಐಹೊಳೆ ಅವರು ತಿಳಿಸಿದ್ದಾರೆ.

ಗಾಯಕರು: ಧಾರವಾಡ ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ, ಶಿವಪುತ್ರಯ್ಯ ಮಠಪತಿ, ವಿಠ್ಠಲ ಜಕನೂರ, ಓಂಕರ ಕರಿಕಂಬಿ, ನಾಗೇಶ ಐಹೊಳೆ, ತುಕಾರಾಮ ಸುಣಧೋಳಿ, ಮೀರಾಸಾಬ ನಧಾಪ, ಲಕ್ಕಪ್ಪ ಮೇತ್ರೀ ಸೇರಿದಂತೆ 25ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿಲಿದ್ದಾರೆ.

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group