spot_img
spot_img

ಮೂಡಲಗಿ ತಾಲೂಕಾ ೨ ನೇ ಸಾಹಿತ್ಯ ಸಮ್ಮೇಳನ; ಆಮಂತ್ರಣ ಪತ್ರಿಕೆ ಬಿಡುಗಡೆ

Must Read

- Advertisement -

ಮೂಡಲಗಿ – ಸಡಗರ ಸಂಭ್ರಮಗಳಿಂದ ಎಲ್ಲರೂ ಸೇರಿ ಮೂಡಲಗಿ ತಾಲೂಕಾ ಸಾಹಿತ್ಯ ಸಮ್ಮೇಳನವನ್ನು ಆಚರಿಸೋಣ ಸಮ್ಮೇಳನದ ಯಶಸ್ಸಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ತಾಲೂಕಾ ಕಸಾಪ ಅಧ್ಯಕ್ಷ ಡಾ.ಸಂಜಯ ಸಿಂಧಿಹಟ್ಟಿ ಹೇಳಿದರು.

ದಿ.೧೮ ರಂದು ತಾಲೂಕಿನ ಶಿವಾಪೂರ ಗ್ರಾಮದಲ್ಲಿ ನಡೆಯಲಿರುವ ಮೂಡಲಗಿ ತಾಲೂಕಾ ೨ ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ರೇ. ಭಾಸ್ಕರ ಸಣ್ಣಕ್ಕಿಯವರನ್ನಾಗಿ ಅಯ್ಕೆ ಮಾಡಲಾಗಿದ್ದು ಅವರಿಗೆ ಇಂದೇ ಆಹ್ವಾನ ನೀಡಲಾಗುವುದು. ಶಿವಾಪೂರದ ಶ್ರೀ ಅಡವಿ ಸಿದ್ದೇಶ್ವರ ಮಠದಲ್ಲಿ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ.

- Advertisement -

ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಜಾನಪದ ಕಾರ್ಯಕ್ರಮಗಳು, ಕಲಾಪ್ರದರ್ಶನಗಳು ನಡೆಯಲಿವೆ. ವಿವಿಧ ಕಲಾವಿದರು ಸಾಹಿತಿಗಳಿಗೆ ಸತ್ಕಾರ ನೆರವೇರಲಿದೆ ಎಂದು ಸಂಕ್ಷಿಪ್ತವಾಗಿ ಸಮ್ಮೇಳನದ ವಿವರಗಳನ್ನು ನೀಡಿದರು.

ತಾಲೂಕಾ ಕಸಾಪ ದ ನಿಕಟ ಪೂರ್ವ ತಾಲೂಕಾ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಮಾತನಾಡಿದರು.

ವೇದಿಕೆಯ ಮೇಲೆ ಶ್ರೀಮತಿ ಶಾಂತಾ ಜಿಣಗಿ, ವೆಂಕಟೇಶ ಹಂಚಿನಾಳ, ಡಾ. ಮಹಾದೇವ ಪೋತದಾರ,ಎ ಎಚ್ ವಂಟಗೋಡಿ ಉಪಸ್ಥಿತರಿದ್ದರು.

- Advertisement -

ಬಿ ಆರ್ ತರಕಾರ ಸ್ವಾಗತಿಸಿ ನಿರೂಪಿಸಿದರು

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group