- Advertisement -
ಸಿಂದಗಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಗೋಲಗೇರಿಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಮತ್ತು ಮಾಜಿ ಜಿಪಂ ಸದಸ್ಯ ಮುರಿಗೆಪ್ಪಗೌಡ ಎಸ್. ರದ್ದೇವಾಡಗಿ ಅವರು ಸುಮಾರು 60-70 ಜನ ಕಾರ್ಯಕರ್ತರೊಂದಿಗೆ ಅಧ್ಯಕ್ಷ ಶಬ್ಬೀರಪಟೇಲ ಬಿರಾದಾರ ಇವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಅಶೋಕ ಕೋರಹಳ್ಳಿ, ಜಗದೀಶ ಕಲಬುರ್ಗಿ, ಡಾ.ಶೌಕತ ಮಳ್ಳಿಕರ ಇದ್ದರು.