ಚಾಮರಾಜನಗರ-ಕನ್ನಡ ಜಾನಪದ ಪರಿಷತ್ ಕರ್ನಾಟಕ ರಾಜ್ಯಾದ್ಯಂತ ಜಾನಪದ ಕಲೆಗಳ ಕ್ಷೇತ್ರಕಾರ್ಯ ದಾಖಲೀಕರಣ, ತರಬೇತಿ ಮೂಲಕ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು,ವಸ್ತು ಸಮಗ್ರ ಧ್ವನಿ ಮುದ್ರಣ, ಜಾನಪದ ಕಲಾವಿದರ ಮಾನ, ಸನ್ಮಾನ ಪ್ರಶಸ್ತಿ ಪ್ರದಾನ ಇತ್ಯಾದಿ ಕೆಲಸಗಳನ್ನು ನಿರ್ವಹಿಸುತ್ತಾ ಕಾರ್ಯಪ್ರವೃತ್ತವಾಗಿರುವ ಕಾರ್ಯಕ್ರಮವಾಗಿದೆ. ಇದೀಗ ತನ್ನ ಎಲ್ಲಾ ನಗರ ಕೇಂದ್ರಿತ ಜಾನಪದ ಚಟುವಟಿಕೆಗಳನ್ನು ಚಾಮರಾಜನಗರ ತಾಲೂಕು ಗ್ರಾಮ ಹೋಬಳಿ ಹಂತದಿಂದ ನಿರ್ವಹಿಸಲು ನಾಗು ರಮೇಶ್ ರವರನ್ನು ರಾಜ್ಯ ಸಂಚಾಲಕರು ಮಹಿಳಾ ಘಟಕ ಇವರ ಶಿಫಾರಸ್ಸಿನ ಮೇರೆಗೆ ಚಾಮರಾಜನಗರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿಯವರು ಅನುಮೋದಿಸಿದ್ದಾರೆ.
ಇವರ ಆಯ್ಕೆಯನ್ನು ಪ್ರಶಂಸಿಸಿ ಹೆಚ್ಚಿನ ರೂಪದಲ್ಲಿ ಸೇವೆಯನ್ನು ಮಾಡುವಂತೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಶುಭ ಹಾರೈಸಿದ್ದಾರೆ.

