- Advertisement -
ಅನುತ್ತೀರ್ಣ ( ನಾಪಾಸ್ ) ಆಗುವುದು
ಎಂದರೆ ಶಿಕ್ಷಣದ ಅವಮಾನವಲ್ಲ .
ಆದರೆ…..
- Advertisement -
ಕ್ಲಾಸ್ ಒನ್ ಆಫೀಸರ್ ಆಗಿ
12 ನೆಯ ತರಗತಿಯಲ್ಲಿ ಅನುತ್ತೀರ್ಣ ( ಫೇಲ್ ) ಆಗಿರುವ ಮಂತ್ರಿಗಳಿಗೆ
” ಸರ್ ಸರ್ ” ಎಂದು ಹೇಳಬೇಕಾಗುತ್ತಲ್ಲ…..
- Advertisement -
ಆಗ ಮಾತ್ರ
ನೂರಕ್ಕೆ ನೂರರಷ್ಟು
ಶಿಕ್ಷಣದ ಘೋರ ಅವಮಾನವಾದಂತೆಯೇ ಸರಿ !
ಇದಕ್ಕೆ ಯಾವುದೇ ರೀತಿಯ
ಗ್ಯಾರಂಟಿ ಇಲ್ಲ !
ಅದರ ಹೆಸರು
” ಜೀವನ ” !
ಮತ್ತು….
ಗ್ಯಾರಂಟಿಯ ಮತ್ತೊಂದು
ಹೆಸರೇ
” ಸಾವು ” !
ರಾಮ ಮಂದಿರ
ನಿರ್ಮಾಣ ಆಗುತ್ತಿದೆ.
ಆದರೆ….
ನಮ್ಮ ದೇಶದಲ್ಲಿಯ
ಸೀತಾ ಮಾತೆಯರು
ಸುರಕ್ಷಿತರಾಗಿರಲು
ಕಠಿಣ ಕಾನೂನು ತರಬೇಕಾಗಿದೆ ಅಲ್ಲವೇ ?
ಜಗತ್ತಿನಲ್ಲಿ ಅತ್ಯಂತ
ಭಾಗ್ಯವಂತ ಮನುಷ್ಯ
ಎಂದರೆ ಯಾರು ?
ಅಂದರೆ ಯಾರ ಹತ್ತಿರ
ಅನ್ನದ ಜೊತೆಗೆ ಹಸಿವು ಇದೆಯೋ,
ಹಾಸಿಗೆಯ ಜೊತೆಗೆ
ಶಾಂತ ನಿದ್ರೆ ಇದೆಯೋ ,
ಸಂಪತ್ತಿನ ಜೊತೆಗೆ
ಧರ್ಮ ಇದೆಯೋ,
ಮತ್ತು…
ತನ್ನ ಬೊಗಸೆಯಲ್ಲಿರುವುದನ್ನು
ಮತ್ತೊಬ್ಬನಿಗೆ ಕೊಡಬೇಕೆನ್ನುವ
ತುಡಿತ ಇದೆಯೋ ,
ಅವನೇ ನಿಜವಾದ ಭಾಗ್ಯವಂತನು !
– ನೀಲಕಂಠ ದಾತಾರ.