spot_img
spot_img

ಕವನ: ಅಸ್ತಿತ್ವ…

Must Read

- Advertisement -

ಅಸ್ತಿತ್ವ

ಸತ್ತಹೋಗಿದ್ದ ಆತ್ಮೀಯರೊಬ್ಬರ
ಮೊಬೈಲ್ ಗೆ
ಅಕಸ್ಮಾತ್ ಆಗಿ
ಕರೆ ಮಾಡಿದಾಗ
ದೊರೆತ ಉತ್ತರ
ಈ ಸಂಖ್ಯೆ ಅಸ್ತಿತ್ವದಲ್ಲಿಲ್ಲ..
ಅವರು ಅಸ್ತಿತ್ವ ಕಳೆದುಕೊಂಡಿದ್ದು
(ಅವರ ಮನೆಯವರ ಮನದಲ್ಲಿ)
ಕೇಳಿ,ನೋಡಿ,ಗಮನಿಸಿ
ಕಣ್ಣಲ್ಲಿ ಹನಿ ಜಿನುಗಿತು..
ಸತ್ತವ ತನ್ನ ಅಸ್ತಿತ್ವ
ಕಳೆದುಕೊಳ್ಳುವುದಾದರೆ,
ಬದುಕಿದ್ದಾಗ ಪ್ರೀತಿಯ ನಾಟಕ ಏಕೆ ಬೇಕು…‌..?
ಸಮಾಜ ನೆನಪಿಸಿಕೊಳ್ಳುವಂಥ
ಏನಾದರೂ ಕೆಲಸ ಮಾಡೋಣ…
ಮನೆಯವರು ಮರೆತರೂ,
ಸಮುದಾಯದ ನೆನಪಲ್ಲಿ
ಚಿರಕಾಲ ಉಳಿದುಬಿಡೋಣ..


ಡಾ.ಭೇರ್ಯ ರಾಮಕುಮಾರ್
ಮೈಸೂರು

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group