spot_img
spot_img

ಕವನ: ಹಣ್ಣುಗಳರಾಜ

Must Read

- Advertisement -

ಹಣ್ಣುಗಳರಾಜ

ಮರದಲಿ ಜೋತು ಬಿದ್ದಿರುವ ಹಣ್ಣು/
ಹಣ್ಣಿನ ಮೇಲೆ ಎಲ್ಲರ ಕಣ್ಣು/
ಹಸಿರು,ತಿಳಿಗೆಂಪು,ಹಳದಿ
ಬಣ್ಣದ ಹಣ್ಣು/
ಎಷ್ಟು ತಿಂದರೂ ಬೇಕೆನಿಸುವ ರಸಪೂರಿಹಣ್ಣು//1//

ಹಣ್ಣುಗಳ ರಾಜಾ ಮಾವಿನ ಹಣ್ಣು/
ಬೇಸಿಗೆಗೆ ಸಿಗುವುದು ಭರಪೂರ ಹಣ್ಣು/
ಪೇಟೆಯ ತುಂಬ ಘಮಘಮ ಹಣ್ಣು/
ವ್ಯಾಪಾರಿಗೆ ಲಾಭವ ತರುವ ಹಣ್ಣು//2//

ಹಲವು ತಳಿಯ ಮಾವಿನ ಹಣ್ಣು/
ಗೊಜ್ಜು,ಚೆಟ್ನಿ,ಉಪ್ಪಿನಕಾಯಿಗೆ ಹಣ್ಣು/
ಜಾಮ್ ಜೆಲ್ಲಿ ಜ್ಯೂಸಿಗೆ ಹಣ್ಣು/
ಮಾರುಕಟ್ಟೆಯಲಿ ಭರ್ಜರಿ ಬೇಡಿಕೆಯ ಹಣ್ಣು//3//

- Advertisement -

ದೇಶ ವಿದೇಶದಲಿ ಬೇಡಿಕೆ ಹಣ್ಣು/
ಉದ್ಯೋಗ ಮೇಳ ವ್ಯಾಪಾರ ಸೃಷ್ಟಿಸಿದ ಹಣ್ಣು/
ಕಾಡಲಿ ಸಿಗುತ್ತಿತ್ತು ಅಡಿಕೆಮಾವಿನ ಹಣ್ಣು/
ಕಾಡೇಯಿಲ್ಲದ ಮೇಲೆ ಇಲ್ಲ ಹಣ್ಣು//4//

ಅನೇಕ ಹೆಸರು ನಿನಗುಂಟು /
ಸೀಕರಣೆ ಚಿತ್ರಾನ್ನ ಬಲುರುಚಿ ವ್ಯಂಜನವುಂಟು/
ಹಣ್ಣುಗಳ ರಾಜ ನಿನಗೆ ಸಮನಾರುಂಟು/
ಸುವಾಸನೆ ನಿನ್ನಲಿ ಭರಪೂರ ಉಂಟು//5//

ಗಾಯಿತ್ರಮ್ಮ, ಶಿವಮೊಗ್ಗ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group