spot_img
spot_img

ಕವನ: ವಿಶ್ವಗುರು ಬಸವಣ್ಣ

Must Read

- Advertisement -

ವಿಶ್ವಗುರು ಬಸವಣ್ಣ

ಸಮಾನತೆಯ ತತ್ವವ ಸಾರಿ
ಜಗದ ತುಂಬೆಲ್ಲಾ ಬೆಳಕು ಬೀರಿ
ಕಾಯಕದಲ್ಲೇ ದೇವರ ಕಾಣಿರೋ ಎಂದು ಸಾರಿ ಸಾರಿ ಹೇಳಿದ
ನುಡಿದಂತೆ ನಡೆದ ಕ್ರಾಂತಿಯೋಗಿ
ಮತ್ತೊಮ್ಮೆ ಕ್ರಾಂತಿ ಗೈಯಲು
ಭುವಿಯ ಬೆಳಕಾಗಿ ಬರುವಿರಾ ಅಣ್ಣಾ ಬಸವಣ್ಣ ?

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ಅಂತರಂಗ ಬಹಿರಂಗ ಶುದ್ಧಿಗಳ ನಿಜ ಸ್ವರೂಪ ಅರುಹಿದ ನಾಡಿನಲ್ಲಿ ಧರ್ಮದ ಅಫೀಮು ತಲೆಗೇರಿಸಿಕೊಂಡವರ ಮನವ ತಿಳಿಗೊಳಿಸಲು ಮತ್ತೊಮ್ಮೆ ಹುಟ್ಟಿ ಬರುವಿರಾ ಅಣ್ಣಾ ಬಸವಣ್ಣ?

ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ನೀವು ಕಟ್ಟಿ ಬೆಳೆಸಿದ ನಾಡಿನೆಲ್ಲೆಡೆ ಇಂದು ನಾನೇ ದೊರೆ ಎಂದು ಮೆರೆಯುತ್ತಿರುವವರ ಮಟ್ಟ ಹಾಕಲು ಮತ್ತೊಮ್ಮೆ ಜಗಕೆ ಅವತರಿಸಿ ಬರುವಿರಾ ಅಣ್ಣಾ ಬಸವಣ್ಣ ?

- Advertisement -

ಇವನಾರವ ಇವನಾರವ ಇವನಾರನೆಂದಿನಸದೆ
ಇವ ನಮ್ಮವ ಇವ ನಮ್ಮವ ನೆಂದು
ಸಕಲ ಜೀವಾತ್ಮರಿಗೆ ಲೇಸ ಬಯಸಿದ ನೀವು ನಡೆದಾಡಿದ ನೆಲದಲ್ಲಿ ಧರ್ಮ ಸಂಘರ್ಷವ ಕೊನೆಗಾಣಿಸಿ ಭ್ರಾತೃ ತ್ವ ನೆಲೆಗೊಳಿಸಲು ಜಗದ ಬೆಳಕಾಗಿ ಭುವಿಗೆ ಬರುವಿರಾ ಅಣ್ಣಾ ಬಸವಣ್ಣ?


ಶಿವಕುಮಾರ ಕೋಡಿಹಾಳ, ಮೂಡಲಗಿ

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group