ಬೈಲಹೊಂಗಲ : ಕೇಂದ್ರ ಸರಕಾರ ದಿನೇ ದಿನೆ ಜನ ಸಾಮಾನ್ಯರು ಬಳಸುವ ಪೆಟ್ರೋಲ ಮತ್ತು ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಕಳೆದ ಒಂದು ವರ್ಷದಿಂದ ಇಡೀ ದೇಶದಲ್ಲಿ ಕೊರೋನಾ ತಾಂಡವಾಡುತ್ತಿದ್ದು ಅನೇಕ ಜನರು ಸಂಕಷ್ಟ ಅನುಭವಿಸಿ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಬಡಜನರು, ಮಧ್ಯಮ ವರ್ಗದ ಜನರು ಬಳಸುವ ದಿನನಿತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ಬಹಳ ತೊಂದರೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಏರಿಕೆ ಮಾಡುತ್ತಿರುವುದು ಖಂಡನೀಯವೆಂದು ಯುವ ಕಾಂಗ್ರೆಸ್ ಸಮಿತಿ ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕಗೌಡ ಪಾಟೀಲ ನೇತೃತ್ವದಲ್ಲಿ ಕಾರ್ಯಕರ್ತರಾದ ಶಿವಕುಮಾರ ಹಂಪನ್ನವರ, ಶಿವಾನಂದ ಸೊಲಬನ್ನವರ, ಬಸವರಾಜ ಕಿತ್ತೂರ, ವಿನಾಯಕ ಬೆಲ್ಲದ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಸೇರಿ ಉಪವಿಭಾಗಾಧಿಕಾರಿಗಳಿಗೆ ಮನವಿ ಅರ್ಪಿಸಿದರು.