spot_img
spot_img

ಕವನ : ಹೆಗ್ಗಳಿಕೆ ಮತ್ತು ಬಿಕ್ಕಳಿಕೆ

Must Read

spot_img
- Advertisement -

ಹೆಗ್ಗಳಿಕೆ ಮತ್ತು ಬಿಕ್ಕಳಿಕೆ
——————————–
ತೂರಿ ಬರುತ್ತವೆ
ಹಾರಿ ಬರುತ್ತವೆ
ಪ್ರಶಸ್ತಿ ಪುರಸ್ಕಾರಗಳು .
ಕಳ್ಳರಿಗೆ ಕಾಕರಿಗೆ
ಸುಳ್ಳರಿಗೆ ಮಳ್ಳರಿಗೆ
ಪ್ರವಚನದಲ್ಲಿ ಕಿರುಚುವವರಿಗೆ
ವಚನ ತಿದ್ದುವವರಿಗೆ ಕದಿಯುವವರಿಗೆ
ಬಸವನ ಹೆಸರಲಿ ಕೊಳ್ಳೆ ಹೊಡೆವವರಿಗೆ
ಧರ್ಮದ ಗುಂಗು ಹಚ್ಚುವವರಿಗೆ
ತಲೆಯ ಮೇಲೆ ಗ್ರಂಥವಿಟ್ಟು
ಹೆಜ್ಜೆ ಹಾಕಿ ಕುಣಿಯುವವರಿಗೆ .
ಮುಖವಾಡ ಸೋಗು ಹಾಕುವವರಿಗೆ
ಬಣ್ಣ ಬಳಿದು ನಟಿಸುವವರಿಗೆ
ಸುಲಿಗೆ ಮಾಡುವವರಿಗೆ
ಅಕ್ಕ ಅಣ್ಣ ಶರಣರೆಂಬ ಡಂಬಕರಿಗೆ
ಲಿಂಗ ತತ್ವ ಮಾರಿಕೊಂಡವರಿಗೆ
ಬಸವ ದ್ರೋಹ ಮಾಡುವವರಿಗೆ
ಜಂಗಮ ಕೊಂದು
ಸ್ಥಾವರ ಸಲುಹುವವರಿಗೆ
ಬರುತ್ತವೆ ಪ್ರಶಸ್ತಿ ಸನ್ಮಾನಗಳು
ಬಿಟ್ಟಿ ಶಾಲು ಕೊರಳಿಗೊಂದು ಹಾರ
ತಟ್ಟೆಯಲ್ಲಿ ಹಣ್ಣು ಕಾಯಿ
ನಾವೂ ಚಪ್ಪಾಳೆ ತಟ್ಟುತ್ತೇವೆ
ಹಲ್ಲು ಕಿಸಿಯುತ್ತೇವೆ
ಇವರನ್ನು ಮತ್ತೆ ಹೊತ್ತು ಮೆರೆಸುತ್ತೇವೆ.
ಪ್ರಶಸ್ತಿ ಬರುತ್ತವೆ ಸುಳ್ಳರಿಗೆ
ಭಂಡರಿಗೆ ಕಳ್ಳರಿಗೆ
ಪ್ರಶಸ್ತಿ ಸಮ್ಮಾನ ಇವರ ಹೆಗ್ಗಳಿಕೆ
ಬಳಲಿ ಬಾಗಿದ ಜಂಗಮದ ಬಿಕ್ಕಳಿಕೆ


——————————–
ಡಾ.ಶಶಿಕಾಂತ.ಪಟ್ಟಣ ಪುಣೆ

- Advertisement -
- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group