spot_img
spot_img

ಕವನ : ಕುವೆಂಪು ನಾ ಹೇಗೆ ಮರೆಯಲಿ

Must Read

spot_img
- Advertisement -

ಕುವೆಂಪು ಹೇಗೆ ನಾ ಮರೆಯಲಿ

ವಸಂತ ಕಾಲ ನನ್ನೇ ನಾ ಮರೆವೆ
ರಾಷ್ಟ್ರಕವಿಯು ಕುವೆಂಪು ತಾನೆ
ಪ್ರಕೃತಿ ಕವಿತೆ ಬರೆದ ನಾಡಪ್ರೇಮಿ
ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಯ
ಹೇಗೆ ನಾನು ಮರೆಯಲಿ

ಕವಿಯೇ ನಿನ್ನ ಕವಿತೆಯಲ್ಲಿ
ವಿಶ್ವಮಾನವ ಸಂದೇಶ ಇರುವಲಿ
ಅಂಕುಶದ ಹಂಗಿಲ್ಲದೆ ಜಗಕೆ ಬೆಳಕಾದ
ವಿಶ್ವ ಚೇತನ ರಾಷ್ಟ್ರ ಕವಿಯ
ಹೇಗೆ ನಾನು ಮರೆಯಲಿ

- Advertisement -

ಮಳೆಯ ಕಾಲದ ದಟ್ಟ ಅನುಭವ
ಕಟ್ಟಿ ಬರೆದರು ಕಥೆಗಳಲ್ಲಿ
ಮಲೆನಾಡಿನ ಜನರ ಜೀವನ ಕಣ್ಣ ಮುಂದೆ
ತೇಲಿ ಬರುತಲಿ ಕಾನೂರು ಕವಿಯ
ಕವಿಯ ಹೇಗೆ ನಾನು ಮರೆಯಲಿ

ದೃಶ್ಯ ಕಾವ್ಯ ಬಿರುಗಾಳಿ ರಮ್ಯ ನಾಟಕ
ಬೆರಳ್ಗೆ ಕೊರಳ್ ರಕ್ತಾಕ್ಷಿ ರುದ್ರನಾಟಕ
ಪುರಾಣ ಕಾವ್ಯ ರಾಮಾಯಣ ದರ್ಶನಂ
ಭಾಗ್ಯ ನೀಡಿದ ಸೃಷ್ಟಿ ಚೈತನ್ಯ ಕವಿಯ
ಹೇಗೆ ನಾನು ಮರೆಯಲಿ
___

ಗೊರೂರು ಅನಂತರಾಜು,
ಹಾಸನ
9449462879

- Advertisement -
- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group