ಕವನ : ಹೆಸರಾದನು ಬಸವಣ್ಣ

Must Read

ಹೆಸರಾದನು ಬಸವಣ್ಣ

ಹೆಸರಾದನು ಬಸವಣ್ಣ
ಉಸಿರಾಗಲಿ ಲಿಂಗಾಯತ
ಗುರು ಲಿಂಗ ಬೀಜಗಳ
ಹಸಿರಾಗಲಿ ಜಂಗಮ

ದುಡಿವವರ ಮೂಲ ಮಂತ್ರ
ಕಾಯಕವೇ ಕೈಲಾಸ
ಕೊಲ್ಲಬೇಡಿ ಬಸವ ಧರ್ಮ
ಸಾಕು ನಿಮ್ಮ ಕರ್ಮ

ಇಲ್ಲ ಬಸವ ಮಠಗಳಲ್ಲಿ
ಇಲ್ಲ ಕಾವಿ ಪೀಠದಲಿ
ಸತ್ಯ ಪ್ರೇಮ ಶಾಂತಿ ಪ್ರೀತಿ
ಸಮತೆ ಸೂರ್ಯ ಕಾಂತಿ

ರಾಜಕೀಯ ಕೆಸರಿನಲ್ಲಿ
ಸಿಲುಕದಿರಲಿ ಶರಣ ತತ್ವ
ಮುಸುಕು ಹರಿದು ಬೆಳಗಾಗಲಿ
ಬಸವನೆಂಬ ದಿವ್ಯ ಜ್ಯೋತಿ

ಅಗ್ರಹಾರದ ಗುಲಾಮರಲ್ಲ
ಕಿತ್ತೊಗೆಯಿರಿ ಭ್ರಮೆ ಭ್ರಾಂತಿ
ಹಸಿ ರಕ್ತ ಹರಿದಿದೆ
ಮರೆಯಬೇಡಿ ಬಸವ ಕ್ರಾಂತಿ
_________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ    9552002338

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group