ಕವನ : ಬಸವ ಮರಳಿ ಬರುವುದಿಲ್ಲ

Must Read

ಬಸವ ಮರಳಿ ಬರುವುದಿಲ್ಲ
—————————-
ವಿಶ್ವ ಬಂಧು ಮಹಾಪುರುಷ
ಜಗದ ಅಣ್ಣ ಬಸವನು
ಮತ್ತೆ ಬಾರನು ಮರಳಿ ಭೂಮಿಗೆ
ವ್ಯರ್ಥವಾಯಿತು ಕ್ರಾಂತಿಯು

ದುಡಿವ ಕೈಗೆ ಕೆಲಸವಿತ್ತು.
ಹಸಿದ ಹೊಟ್ಟೆಗೆ ಪ್ರಸಾದವು
ಜಾತಿ ಕಸದ ಬೇರು ಕಿತ್ತು
ಹಸನ ಮಾಡಿದ ಬಾಳನು

ಉಚ್ಚ ನೀಚ ರಾಜ ರಂಕ
ದುಡಿಮೆ ಸೂತ್ರ ಮಂತ್ರವು
ಒಂದು ಮಾಡಿದ ಹಿರಿಮೆ ಗರಿಮೆ
ಈಗ ಭ್ರಮೆ ಇಲ್ಲ ಶಾಂತಿ.

ಬಸವನೆಸರಲಿ ಕೊಳ್ಳೆ ಹೊಡೆವರು
ಅಕ್ಕ ಮಾತೆ ಸ್ವಾಮಿ ಶರಣರು
ಗ್ರಂಥ ಕದ್ದು ವಚನ ತಿದ್ದಿ
ದೊಂಬರಾಟದ ಭ್ರಾಂತಿಯು

ಮಠಗಳಲಿ ಬಸವ ಬಂಧಿಯು
ತತ್ವ ಯಜ್ಞ ಹೋಮವು
ಅರುಹು ಮರೆತು ಕುಣಿಯುತಿಹರು
ಬಸವ ಮೌನವಾದನು

ಬಸವ ಮರಳಿ ಬರುವದಿಲ್ಲ
ಸಮತೆ ಹಣತೆ ಒಡೆಯಿತು
——————————
ಡಾ.ಶಶಿಕಾಂತ.ಪಟ್ಟಣ. ರಾಮದುರ್ಗ

Latest News

ಕುಳಲಿಯಲ್ಲಿ ರಾಜ್ಯಮಟ್ಟದ ಸಂಗೀತೋತ್ಸವ

ಸಾಧಕ ಕಲಾವಿದರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮುಧೋಳ - ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ರಾಜ್ಯಮಟ್ಟದ...

More Articles Like This

error: Content is protected !!
Join WhatsApp Group