- Advertisement -
ಶುಭೋದಯ
ಚಂದನವನದ
ಶುಭೋದಯದಲಿ
ಮೂಡಿಬಂದಿರಿ ನೀವು
ಅಗಾಧ ವ್ಯಕ್ತಿತ್ವದ
ಮೇರುಪರ್ವತದ ನಿಲುವಿನಲಿ
ವಚನದಾರ್ಶನಿಕರಾಗಿ
ಎಲ್ಲರ ಮನ ಮುಟ್ಟಿದಿರಿ
ಇಂದು
ತಿಳಿಹೇಳಿದಿರಿ ಔಷಧಿ
ಆರೋಗ್ಯ ಕೃಷಿಯ ಕುರಿತು
ಮನನಮಾಡಿಸಿದಿರಿ
ವಚನಸಾರದ ಒಳಾರ್ಥಗಳ
ಹೆಮ್ಮೆಯಿಂದ ಹಂಚಿಕೊಂಡಿರಿ
ಅಕ್ಕನ ಅರಿವಿನ ಉಪನ್ಯಾಸಗಳ
ಅದಕ್ಕಾಗಿ ದುಡಿವವರ ಹೆಸರುಗಳ
- Advertisement -
ಕವಿಯಾಗಿ ಕುವೆಂಪು ಅವರ
ನೆನಪಿಸುತ್ತಾ
ನಿಸರ್ಗಪ್ರೇಮಿಯಾಗಿ
ಪ್ರಾಣಿ -ಪಕ್ಷಿ ಸಂಕುಲವನ್ನು
ಪ್ರೀತಿಸುವುದ ಅರುಹಿದಿರಿ
ಭಾವುಕರಾದಿರಿ
ಅವ್ವನ ಮಾತೃ ಹೃದಯವನ್ನು
ತಂದೆಯ ಕಳಕಳಿಯ
ನೆನೆದು
ಅಭಿಮಾನದಿಂದ ಹೇಳಿದಿರಿ
ಧರ್ಮಪತ್ನಿಯ
ಸಹಕಾರ ಮನೋಭಾವವ
ಮೂಡಿಬಂದಿರಿ
ಶುಭೋದಯದಲಿ ಇಂದು
ನಮ್ಮೆಲ್ಲರ ಹೆಮ್ಮೆಯ
ಮಾರ್ಗದರ್ಶಕರಾಗಿ
ಬುದ್ಧ -ಬಸವ – ಅಂಬೇಡ್ಕರರ
ಶರಣತತ್ವದ ನಿಜವಾದ ಹರಿಕಾರರಾಗಿ
- Advertisement -
ಸುಧಾ ಪಾಟೀಲ
ಬೆಳಗಾವಿ