spot_img
spot_img

ಕವನ : ಶುಭೋದಯ

Must Read

spot_img
- Advertisement -

ಶುಭೋದಯ

ಚಂದನವನದ
ಶುಭೋದಯದಲಿ
ಮೂಡಿಬಂದಿರಿ ನೀವು
ಅಗಾಧ ವ್ಯಕ್ತಿತ್ವದ
ಮೇರುಪರ್ವತದ ನಿಲುವಿನಲಿ
ವಚನದಾರ್ಶನಿಕರಾಗಿ
ಎಲ್ಲರ ಮನ ಮುಟ್ಟಿದಿರಿ
ಇಂದು

ತಿಳಿಹೇಳಿದಿರಿ ಔಷಧಿ
ಆರೋಗ್ಯ ಕೃಷಿಯ ಕುರಿತು
ಮನನಮಾಡಿಸಿದಿರಿ
ವಚನಸಾರದ ಒಳಾರ್ಥಗಳ
ಹೆಮ್ಮೆಯಿಂದ ಹಂಚಿಕೊಂಡಿರಿ
ಅಕ್ಕನ ಅರಿವಿನ ಉಪನ್ಯಾಸಗಳ
ಅದಕ್ಕಾಗಿ ದುಡಿವವರ ಹೆಸರುಗಳ

- Advertisement -

ಕವಿಯಾಗಿ ಕುವೆಂಪು ಅವರ
ನೆನಪಿಸುತ್ತಾ
ನಿಸರ್ಗಪ್ರೇಮಿಯಾಗಿ
ಪ್ರಾಣಿ -ಪಕ್ಷಿ ಸಂಕುಲವನ್ನು
ಪ್ರೀತಿಸುವುದ ಅರುಹಿದಿರಿ

ಭಾವುಕರಾದಿರಿ
ಅವ್ವನ ಮಾತೃ ಹೃದಯವನ್ನು
ತಂದೆಯ ಕಳಕಳಿಯ
ನೆನೆದು
ಅಭಿಮಾನದಿಂದ ಹೇಳಿದಿರಿ
ಧರ್ಮಪತ್ನಿಯ
ಸಹಕಾರ ಮನೋಭಾವವ

ಮೂಡಿಬಂದಿರಿ
ಶುಭೋದಯದಲಿ ಇಂದು
ನಮ್ಮೆಲ್ಲರ ಹೆಮ್ಮೆಯ
ಮಾರ್ಗದರ್ಶಕರಾಗಿ
ಬುದ್ಧ -ಬಸವ – ಅಂಬೇಡ್ಕರರ
ಶರಣತತ್ವದ ನಿಜವಾದ ಹರಿಕಾರರಾಗಿ

- Advertisement -

ಸುಧಾ ಪಾಟೀಲ
ಬೆಳಗಾವಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group