spot_img
spot_img

ಕವನ : ಓ ಬಾಪು

Must Read

spot_img
- Advertisement -

ಓ ಬಾಪು

ಜಗದ ಬೆಳಕೇ
ಸದ್ದಿಲ್ಲದಂತೆ ಸರಿದು
ಸರಹದ್ದಿಗೂ ಮೀರಿ
ದಿನಕರ ಮಬ್ಬಿಗೆ ಸರಿಸಿ
ಕೊನೆಯ ಉಸಿರೆಳೆದಿದೆ.

ಮಹಾತ್ಮನೆಂಬ ವ್ಯಕ್ತಿತ್ವ
ಸತ್ಯ ಪಥದ ಸಾಕಾರ ಮೂರ್ತಿ
ವ್ಯತಿರಿಕ್ತದಿ ನಂದಿದೆ
ಪರಿತ್ಯಾಗಿಯಾಗಿ ನಡೆದು
ಕರುಣೆ
ಹೇಳ ಹೆಸರಿಲ್ಲದಂತಾಗಿದೆ.

- Advertisement -

ಭಾರತದ ದಿವ್ಯ ಜ್ಯೋತಿ
ಸ್ವಾತಂತ್ರ್ಯದ ಹರಿಕಾರ
ಚಳವಳಿಯ ನೇತಾರ
ನಿನಗೆ ಹತ್ಯೆಯ ಬಳುವಳಿ
ಏಕಿಂತಹ ಘೋರ.

ವಿಶ್ವ ಶಾಂತಿಗೆ
ರಕ್ತದೋಕುಳಿ ಹರಿಸಿ
ಬೆರಗು ಮೂಡಿಸಿದಾತನಿಗೆ
ಚಿರನಿದ್ರೆಯ ಬಾಗಿನವೇ
ಕಳವಳಕಾರಿ ಸುದ್ದಿಯ ನೇಮ.

ಓ ಬಾಪು
ನಿನಗಾರು ಸರಿಸಾಟಿ
ಉಪವಾಸದ ನಡಿಗೆ
ಸರಳ ಸುವಿಚಾರದ ವ್ಯಕ್ತಿಗೆ
ದುರುಳತನದಿ ಹರಿತವೇ.

- Advertisement -

ಮತ್ತೊಮ್ಮೆ ಬಂದು ಬಿಡು
ಮತ್ತಿನ ಜನಕೆ ಪಾಠ ಕಲಿಸಿ
ಮುತ್ತಿನ ಮಾತನು ತಿಳಿಸಿ
ಬೇಜವಾಬ್ದಾರಿ ತನಕೆ ನೀರಿಳಿಸಿ
ಭಾರತದ ಭವ್ಯತೆಗೆ ಝೇಂಕರಿಸಿ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group