ಕವನ : ಕವಿತೆಯ ಅಳಲು

Must Read

ಕವಿತೆಯ ಅಳಲು

ಸಾಲ ಮಾಡಿ ಕವನ ಸಂಕಲನ
ಪ್ರಕಟಿಸಿದ ನಮ್ಮ ಕವಿಗೆ
ಸಾಹಿತ್ಯ ಸಮ್ಮೇಳನದಲ್ಲಿ
ಶಾಲು ಹೊದಿಸಿ ಸನ್ಮಾ ನಿಸಿ
ಹಾಡಿ ಹೊಗಳಿದರು
ಮನೆಯಲ್ಲಿ ಮಡದಿ ರೇಗಿದಳು
ಹೊದ್ದುಕೊಂಡು ಶಾಲು ಬೆಚ್ಚಗೆ
ಮಲಗಿರಿ ರೂಮಲ್ಲಿ ತೆಪ್ಪಗೆ
ಮತ್ತೆ ಕವಿತೆ ಬರೆದರೆ
ನಾ ಹೋಗುವೆ ತೌರಿಗೆ !
ಹೆಂಡತಿ ಬಿಟ್ಟರೂ ನಮ್ಮ ಕವಿ
ನನ್ನನ್ನು ಬಿಡುವನೆ
ಬಿಡದೆ ಬರೆದನು ಬಂಡಾಯ ಕವಿತೆ
ಮುನಿದು ಮಡದಿ ತವರಿಗೆ
ನಮ್ಮ ಕವಿ ಅಡಿಗೆ ಮನೆ ಒಳಗೆ !
ಕೋಸಂಬರಿಯಿಂದ ಕಾದಂಬರಿ ವರೆಗೆ
ಅಡಿಗೆ ಮನೆ ಸಾಹಿತ್ಯ ಬರೆದನು
ಮಡದಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸಿದನು
ಬಿಸಿ ಬಿಸಿ ದೋಸೆಯಂತೆ ಖರ್ಚಾಗಿ
ಮಡದಿ ಬೆಳಕಿಗೆ ಬಂದಳು
ನಮ್ಮ ಕವಿ ಕತ್ತಲೆಗೆ ಸರಿದನು
ಕವಿಯ ಮಡದಿ ಈಗ ಸಮಾಜ ಸುಧಾರಕಿ
ನಮ್ಮ ಕವಿ ಅಡಿಗೆ ಮನೆ ಸುಧಾರಕ !
—-
ಗೊರೂರು ಅನಂತರಾಜು, ಹಾಸನ
9449462879

ವಿಳಾಸ: ಹುಣಸಿನಕೆರೆ ಬಡಾವಣೆ
29ನೇ ವಾರ್ಡ್,
3 ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group