ಕವನ : ಬಿಡದಿರಿ ನಮ್ಮತನ

Must Read

ಬಿಡದಿರಿ ನಮ್ಮತನ

ತನ್ನತನವ ಬಿಟ್ಟು
ತನ್ನದಲ್ಲದಕೆ ಹರಿ ಬಿಟ್ಟು
ಕನ್ನಿಕೆಯ ಹಿಂದೋಡಿ
ಕುನ್ನಿಯಂತಾಗಬೇಕೆ ಮೋಡಿ.

ನಮ್ಮೊಳಗಿನದ ಸರಿಸಿ
ಪರರದಕೆ ಮೋಹಿಸಿ
ದಾಹ ತೀರಿದ ಮೇಲೆ
ಎಡ ಬಿಡಂಗಿಯಾಗಬೇಕೆ.

ಹರಸುವರು ಮೊದಲು
ಹೌಹಾರ ಬೇಡ
ಆರಿಸಿ ನೋಡೋಮ್ಮೆ
ತಾರಸಿಯ ಹತ್ತಿಸಿ ಒದೆಯುವರು.

ಮತ್ತಿನ ರಂಗು ತೋರಿಸಿ
ರಂಗಿನಾಟ ಆಡುವರು
ಕುಣಿಸುತಿಹರು ಮನ ಬಂದಂತೆ
ದಂಗಾಗದಿರು ಹಂಗು ತೊರೆದು.

ನೆಪ ಒಡ್ಡಿ ಕರೆವರು
ಕೊರಳ ಕೊಯ್ಯುವರು
ಪರ ಮೋಹ ತರವಲ್ಲ
ಓರೆ ಕೊರೆಗಳು ಸಹಜ ತಿದ್ದಿ ಮುಂದೆ ನಡೆ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group