ಕವನ : ಸೈತಾನನ ಸಂತತಿ !!

Must Read

ಸೈತಾನನ ಸಂತತಿ!!

ಬಟ್ಟೆಯ ಬಿಚ್ಚಿಸಿ ನೋಡಿದರೆ
ಧರ್ಮವು ಕಾಣುವುದೇ…!

ನಡೆ ನುಡಿ ಸಹೃದಯಗಳಲಿ
ಅಡಗಿದೆ ಮಾನವ ಧರ್ಮ…

ಧರ್ಮದ ಅಮಲು ನೆತ್ತಿಗೇರಿಸಿ
ನರ್ತನ ಮಾಡುವ ಅಧಮರೇ

ಕ್ರೂರ ಮನದ ಕೊಲೆಗಡುಕ
ಸೈತಾನನ ಸಂತತಿಯವರೇ…

ಅರ್ಥವಾಗದು ದುರುಳ ಜನಕೆ
ಕರುಳ ಸಂಬಂಧಗಳ ನೋವು

ಕಲಿಸುವುದು ಕಾಲವೇ ನಿಮಗೆ
ಕೊಳಕು ಮನದ ಕ್ರಿಮಿಗಳೇ…

ಪಹಲ್ಗಮ್ ನಲ್ಲಿ ನೆತ್ತರು ಸುರಿಸಿ
ಬಲಿದಾನವಾದ ಸಹೋದರರೇ

ಭಗವಂತ ಚಿರಶಾಂತಿ ನೀಡಲಿ
ನಿಮಗಿದೋ ಸಾವಿರ ನಮನ…

ಎ.ಎಸ್.ಗಡದವರ(ಅಡವೀಶ)
ಹಿ.ಪ್ರಾ.ಕ.ಹೆ.ಮ.ಆಶ್ರಮ ಶಾಲೆ
ದೇಶನೂರ – 591147
ತಾ:ಬೈಲಹೊಂಗಲ ಜಿ:ಬೆಳಗಾವಿ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group