ಬಸವ ಬೆಳಗು
ಬಸವನೆಂಬ ಬೆಳಗು
ಆತ್ಮ ಪರಿಶುದ್ಧತೆಯ ಒಳಹೊರಗು
ಸಮತೆಯ ಭಾವ
ವಾಸ್ತವದ ಅನುಭವ.
ಕಾಯಕನಿಷ್ಠೆಯ ಪ್ರಭಾವ
ಇಹಪರದ ಸೂಚಕ
ಬಾಳ ದೀವಿಗೆಗೆ ದಿಕ್ಸೂಚಿ
ಲಿಂಪೂಜೆಯ ಅನುಸೂಚಿ.
ಮತದ ಭ್ರಮೆಯ ಹುಟ್ಟಡಗಿಸಿ
ಮಾನವೀಯತೆಯ ಝೇಂಕರಿಸಿ
ಜನಮಾನಸದಿ ಅಚ್ಚೊತ್ತಿ
ಭಕ್ತಿ ಭಂಡಾರಿಯ ರೂಪಕ.
ಶರಣ ಚಳವಳಿಯ ರೂವಾರಿ
ಸಮಾಜದ ಅನನ್ಯತೆಯ ಸಿರಿ
ಅನುಭವ ಮಂಟಪದ ಚೈತನ್ಯ
ಚಿಂತನ ಮಂಥನ ಪ್ರಾಧಾನ್ಯ.
ವಿಶ್ವ ಮಾದರಿಯ ವ್ಯಕ್ತಿತ್ವ
ಕೇಡು ಬಯಸದ ತತ್ವ
ಬರಡು ಭೂಮಿಯಲು ಜಿನುಗು
ಹತಾಶೆಯಾದವರ ಅಂತಃಕರಣ.
ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರ