ಕವನ : ಕವಿ ಬಯಕೆ

Must Read

ಕವಿ ಬಯಕೆ

ಒಬ್ಬ ಸಾಹಿತ್ಯ ಪ್ರಿಯ
ಕವಿಯಾಗಲೆಂದು
ಏನೇನೋ ಬರೆದ
ಕವಿಯಾದ ಮೇಲೆ
ಬರೀಲೇಬೇಕಂತ
ಇನ್ನಷ್ಟು ಬರೆದ
ಕಿವಿಯಿಂದ
ಕೇಳುವುದ ಕೇಳಿದ
ಕೇಳಬಾರದ್ದು ಕೇಳಿದ
ಕಣ್ಣಿಂದ
ಒಳಿತು ನೋಡಿದ
ಕೆಡುಕನ್ನೂ ನೋಡಿದ
ಸರಿ ಅನಿಸಿದ್ದೆಲ್ಲ
ಹಾಳೆಗೆ ಸುರಿದ
ತಪ್ಪು ಅನಿಸಿದ್ದೆಲ್ಲ
ಹೊರಗೆಸೆದ
ಕನಸುಗಳಿಂದ
ಕಾವ್ಯ ಹೊಸೆದ
ಸನ್ನಿವೇಶಗಳಿಂದ ಕಥೆ ಕಟ್ಟಿದ
ಪ್ರೀತಿಗಳಿಗೆ ಬಣ್ಣ ಬಳಿದ
ದ್ವೇಷಗಳಿಗೆ ಸುಣ್ಣ ಸವರಿದ
ಸ್ನೇಹಕ್ಕೆ ನಮಸ್ಕರಿಸಿದ
ಅಸೂಯೆಗೆ ಅವಮಾನಿಸಿದ
ಅಕ್ಷರಗಳಿಗೆ ಅಂದ ನೀಡಿದ
ಸಾಲುಗಳ ಸೃಷ್ಟಿ ಮಾಡಿದ
ಬರೆದ ಬರೆದ
ಹಾಳೆ ತುಂಬಿಸಿದ
ಅರ್ಥ ಬಿಂಬಿಸಿದ
ಸರಿಯಾಗಿ ಜೋಡಿಸಿದ
ಪುಸ್ತಕಗಳ ಮಾಡಿದ
ಕವಿಯಂತೂ ಆದ
ಓದುವ ಮನಸುಗಳಿಗಾಗಿ
ಕಾಯ್ದ ಕಾಯ್ದ
ಕಾಯುತ್ತಲೇ ಕಂಗಾಲಾದ

ಎಂ.ಸಂಗಪ್ಪ
ಲಿಂಗಸುಗೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group