ಕವನ : ಕರುಣದಿಂದಲಿ ಕಾಯೋ ಗುರುರಾಯ

Must Read

ಕರುಣದಿಂದಲಿ ಕಾಯೋ ಗುರುರಾಯ

ಕಲಿಯುಗ ದೈವ ಶ್ರೀ ರಾಘವೇಂದ್ರ
ಒಲಿದರೆ ಯಾವುದೇ ಭಯವಿಲ್ಲ
ನಲಿಯುವಿರೆಲ್ಲ ರಾಯರ ಕೃಪೆಯಿಂ
ಕಾಲಿಟ್ಟಲ್ಲಿ ಬರೀ ಜಯವೆಲ್ಲ

ಕರುಣಾಸಾಗರ ಈ ನಮ್ಮ ದೇವರು
ಹರಸುವರೆಲ್ಲರ ಕೃಪೆ ತೋರಿ
ನರವೇಷ ತೊಟ್ಟು ಭುವಿಗೆ ಬಂದಿಹ
ಪರಶಿವನೇ ಸರಿ ಕೈ ಮುಗಿರಿ

ಗುರುವಾರದ ದಿನ ಗುರುವಿನ ಧ್ಯಾನ
ಅರಿವಿನ ಹೊಳೆಯನೆ ಹರಿಸುವನು
ಬರಿಗೈ ಇರಲಿ, ಧನಿಕನೆ ಬರಲಿ
ಸರಿಸಮನಾಗಿ ಕಾಣುವನು

ತಂದೆಯು ನೀನೇ, ತಾಯಿಯು ನೀನೇ
ಬಂಧು ಬಳಗವು ನೀನಯ್ಯ
ಚೆಂದದ ಭಾವವ ಕರುಣಿಸಿ ಕಾಯೋ
ಮಂದಮತಿಯು ನಾ ಬಿಡದಿರು ಕೈಯ.

✍️ ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group