ಕವನ : ದೀಪಾವಳಿ

Must Read

ದೀಪಾವಳಿ

ಸಾಲು ಸಾಲು
ದೀಪಗಳು
ಕಣ್ಣುಗಳು ಕೋರೈಸಲು
ಒಳಗಣ್ಣು ತೆರೆದು
ನೋಡಲು
ಜೀವನದ ಮರ್ಮ
ಕರ್ಮ ಧರ್ಮಗಳನು
ಅರಿಯಲು
ಸಾಲು ಸಾಲು
ದೀಪಗಳು
ಮೌಢ್ಯವ ಅಳಿಸಲು
ಜ್ಞಾನವ ಉಳಿಸಿ
ಬೆಳೆಸಲು
ಸಾಲು ಸಾಲು
ದೀಪಗಳು
ಮನೆಯನು ಬೆಳಗಲು
ಮನವನು ತೊಳೆಯಲು
ಸಾಲು ಸಾಲು
ದೀಪಗಳು
ನಮ್ಮ ನಿಮ್ಮ
ಎಲ್ಲರ ಮನೆ
ಹಾಗೂ ಮನವನು
ಬೆಳಗಲಿ
ಮಾನವೀಯತೆಯ
ಜ್ಯೋತಿ ಎಲ್ಲೆಡೆ
ಪಸರಿಸಲಿ
ಶುಭ ದೀಪಾವಳಿ 🌹

ಡಾ. ಜಯಾನಂದ ಧನವಂತ

Latest News

ರೈತರು ಸಾವಯವ ಕೃಷಿ ಮಾಡಿ ಭೂಮಿಯ ಫಲವತ್ತತೆ ಕಾಯಬೇಕು – ಸಹದೇವ ಯರಗೊಪ್ಪ

ಮೂಡಲಗಿ: ’ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಅವಶ್ಯವಿದೆ’ ಎಂದು ಚಿಕ್ಕೋಡಿ ಉಪ...

More Articles Like This

error: Content is protected !!
Join WhatsApp Group