ಸತ್ಯವನ್ನು ಹೇಳುತ್ತೇವೆ
ಕವನಗಳು
ಬುಲೆಟ್ ತಡೆದು
ನಿಲ್ಲಿಸಲಾರವು
ಕಾದಂಬರಿ
ಬಾಂಬ್ ಗಳನ್ನು
ನಿಷ್ಕ್ರಿಯ ಮಾಡುವದಿಲ್ಲ
ಕಥೆಗಳು ದೊಣ್ಣೆಯನ್ನು
ಮುರಿಯಲಾರವು
ಲಘು ಸಾಹಿತ್ಯ
ಖಡ್ಗ ಕಠಾರಿ
ಕೊಲೆ ಹಿಂಸೆ
ನಿಯಂತ್ರಣ ಮಾಡಲಾರವು.
ಪೂಜೆ ಪ್ರಾರ್ಥನೆ
ಯುದ್ಧವನ್ನು ನಿಲ್ಲಿಸಲಾರವು
ನಾವು ಸತ್ಯವನ್ನು ಹೇಳುತ್ತೇವೆ.
ಸಾಯುವ ಮುನ್ನ
ಸುಳ್ಳು ಹೇಳುವವರ
ಮೋಸ ಮಾಡಿದವರ
ಧರ್ಮದ ಹೆಸರಿನಲ್ಲಿ
ಸುಲಿಗೆ ಮಾಡುವವರ
ಯುದ್ಧ ರಕ್ತ ಬೀಜಾಸುರರ
ಹೆಸರು ಹೇಳುತ್ತೇವೆ.
ಹುಟ್ಟಿ ಬರಲಿ
ಚೇಗುವಾರ ಭಗತ್
ಬುದ್ಧ ಮತ್ತೆ ನಗಲಿ
ಬಸವ ಭಾರತ ಗೆಲ್ಲಲಿ
ಇಂಕ್ವಿಲಾಬ್ ಜಿಂದಾಬಾದ್
———————————-
ಡಾ.ಶಶಿಕಾಂತ ಪಟ್ಟಣ ರಾಮದುರ್ಗ