spot_img
spot_img

ಕವನ : ಪ್ರಕೃತಿ

Must Read

spot_img
- Advertisement -

ಪ್ರಕೃತಿ

ಮಂಜಿನ ಹೊದಿಕೆಯ ಹೊದ್ದು ಮಲಗಿದ ಗಿರಿಸಾಲು,
ಹಸಿರಸಿರು ಹಾಸಿನಲಿ ತಂಗಾಳಿ ಬೀಸಿನಲಿ,
ಆಗಸವು ಭುವಿಗಿಳಿದು ಬರೆಯುತಿದೆ ಪ್ರೇಮಕಾವ್ಯ,
ಅಂಕುಡೊಂಕು ಸಾಲುಗಳಲಿ, ತಟಪಟದ ಪದಗಳಲಿ,
ಎಲೆಯಂಚಿನ ಮೊನಚಿನಲಿ, ಚಿಗುರು ಕೆಂಬಣ್ಣದಲಿ,
ಉತ್ತುಂಗದ ಉಪಮೆಯಲಿ,
ಬೆಟ್ಟದಡಿಯ ಉಪಮಾನದಲಿ,
ಪುಷ್ಪಗಳ ಅಲಂಕಾರದಲಿ,
ಇಂದ್ರಚಾಪ ವೃತ್ತದಲಿ,
ಚೆಂದದ ಸಂಧಿಗಳಲಿ,
ಮಾಸದ ಸೌಂದರ್ಯದ ಸಮಾಸಗಳಲಿ,
ಮನದ ನದಿಗಳಲಿ ಚೈತನ್ಯದ ಸಂಚಾರ
ನೋಡಿದಷ್ಟು ನಯನ ಮನೋಹರ,
ಪ್ರಕೃತಿಯ ವ್ಯಾಕರಣದ ವಯ್ಯಾರ…

- Advertisement -

ಪ್ರಸನ್ನ ಜಾಲವಾದಿ architect                         ಬೆಂಗಳೂರು

- Advertisement -
- Advertisement -

Latest News

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ ಬೆಳಗಾವಿ- ಸಹಕಾರ ವಲಯದ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group