ಕವನ : ನನ್ನಪ್ಪ

Must Read

ನನ್ನಪ್ಪ

ಉಸಿರ ನೀಡಿ
ಬೆವರ ಬಸಿದು
ಬೆಚ್ಚಗಿನ ಸೂರಲಿ
ಪೊರೆದ ಜೀವ.

ನೋವ ನುಂಗಿ
ನಲಿವ ಹಂಚಿ
ಬಾನಂಚಿನ ತಾರೆ
ಇರುಳಲೂ ಮಿನುಗುತ.

ವಾತ್ಸಲ್ಯ ತೋರಿ
ತಲ್ಲಣವ ದೂರಿಕರಿಸಿ
ತನ್ನದಲ್ಲದ ಬದುಕಿಗೆ
ತೇಯ್ದ ಗಂಧ.

ತಾನು ಹಸಿದು
ತನ್ನವರ ಹೊಟ್ಟೆ ತುಂಬಿಸಿ
ಮಾಸಿದ ಬಟ್ಟೆಯಲೂ
ದಿಟ್ಟ ನಿರ್ಧಾರ ಕೈಗೊಳ್ಳುವ.

ಛಲವ ಹೊತ್ತು ಸಾಗಿ
ಒಲವ ಬಲವ ತುಂಬಿ
ಬಾಳ ಬಂಡಿಗೆ ನೊಗವೇ ಆಗಿ
ತಾಳ ಮೇಳ ಸೇರಿಸುತ.

ಆಲದ ಮರದ ಬೇರು
ನೆಲೆಗಾಗಿ ಹೋರಾಟ
ತನ್ನದೆಲ್ಲ ಕಡೆಗಣಿಸಿ
ಮುಂದಡಿಗೆ ಪ್ರೇರಣೆ.

ರೇಷ್ಮಾ ಕಂದಕೂರ
ಶಿಕ್ಷಕಿ, ಸಿಂಧನೂರು

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group