spot_img
spot_img

ಕವನ : ಕಲ್ಯಾಣ ಕನ್ನಡ

Must Read

spot_img
- Advertisement -

ಕಲ್ಯಾಣ ಕನ್ನಡ

ಇರಬೇಕು ಕನಿಕರ ಕಟ್ಟುವ ಕಲ್ಯಾಣ ಜ್ಯೋತಿ
ಕಟ್ಟಿದರು ಕನ್ನಡ ಕಲ್ಯಾಣದ ಪಣತಿ
ಕನ್ನಡಾಂಬೆಯ ಮಡಿಲ ಕಂದನ ಪ್ರೀತಿ
ದ್ವೇಷ ಮತ್ಸರವ ಭಾವ ದೂಡಿ
ನೀತಿಯಾ ಮಾರ್ಗದಲಿ ಸತ್ಯದಾ ಪಟವು ಹಾರಿ
ತಿಳಿಯಬೇಕು ಮನ ಕರೆವ
ನೂರೆಂಟು ನಮನ
ಸಲ್ಲದು ಸಂಕುಚಿತ
ವಿಶ್ವವೆಲ್ಲ ಒಂದೇ ಕುಟುಂಬ
ತಿಳಿದು ಸಾಗಿದರು ವಿಶ್ವ ಮಾನವ
ಮನುಜ ಮತ ವಿಶ್ವ ಪಥ
ಕಟ್ಟಿ ಎಳೆದರು
ಕನ್ನಡದ ರಥ
ಹಲವು ಹೂ ಪುಷ್ಪ
ಮನಕೆ ನಮಿಸಿ
ಸಾಗುತ್ತಿದೆ ಕಲ್ಯಾಣದ ಕೀರುತಿ
ಹೊಗಳಿಕೆ ತೆಗಳಿಕೆ ಸೋಲು ಗೆಲುವು ಒಂದೇ
ಎಂದರು ಸಿದ್ಧಪುರುಷರು
ಮನದ ವೈರ ಕಿತ್ತು ವಗೆದು
ಭಾವ ನಿರ್ಮಲ ಜಗಕೆ ಸಾರಿ
ಇರುಳು ಬೆಳಗು ಕಾಯಕಯೋಗಿ
ಕಲಿಸಿ ನಡೆಸಿದ ಶರಣ ಯೋಗಿ
ಮಾತು ನಡೆ ಒಂದೇ ಇರಲಿ
ಬಡವ ಬಲ್ಲಿದ ಭೇದ ಅಳಿಯಲಿ
ಅಕ್ಕ ಅಣ್ಣ ಒಂದೇ ಆತ್ಮ
ಸಿದ್ಧ ಪುರುಷರು ಎದ್ದು ನಡೆದರು
ಜಗವ ಬೆಳಗಿದ ಬುದ್ಧ ಬಸವ
ಕಟ್ಟಿ ನಡೆದರು ಕಲ್ಯಾಣ ಕನ್ನಡ
ವಚನ ಕಟ್ಟು ಹೃದಯ ತಟ್ಟಿ
ಹುಟ್ಟು ಹಾಕಿದರು ಕಲ್ಯಾಣ ಕನ್ನಡ
_____________________
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪೂರ

- Advertisement -
- Advertisement -

Latest News

 ದಿ. 9 ರಂದು ಕಪ್ಪತಗುಡ್ಡದಲ್ಲಿ 9 ನೇ “ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ”

ಗದಗ - ಚಾರಣ ಪ್ರಿಯರು ಮತ್ತು ಸಸ್ಯ ಪ್ರಬೇಧಗಳ ಅಧ್ಯಯನ ನಡೆಸಲು ಕ್ಷೇತ್ರಭೇಟಿ ನೀಡಬಯಸುವ ಸಂಶೋಧನಾಕಾರರಿಗೆ, ಅಧ್ಯಾಪಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಆಯುರ್ವೇದ ಹಾಗೂ ಪಾರಂಪರಿಕ ವೈದ್ಯರಿಗೆ,...
- Advertisement -

More Articles Like This

- Advertisement -
close
error: Content is protected !!
Join WhatsApp Group