ಕವನ : ಬಿಟ್ಟು ಬಿಡು

Must Read

ಬಿಟ್ಟು ಬಿಡು

ಮರೆಯಾಗಿ ಬಿಡು
ಅಮವಾಸ್ಯೆಯ ಚಂದ್ರನಹಾಗೆ
ತೊರೆದು ಬಿಡು
ನಿನ್ನ ಆದರಿಸದವರನು.

ತೆರೆಯೆಳೆದು ಬಿಡು
ದೂಷಿಸುವವರನು ಕಡೆಗಣಿಸಿ
ಮೇರೆ ಮೀರಿಬಿಡು
ನಿನ್ನದಲ್ಲದ ತಪ್ಪಿಗೆ ಒಪ್ಪಿಸಿದವರನು.

ಗೆರೆಯೆಳೆದು ಬಿಡು
ಅವಕಾಶವಾದಿಗಳ ದೂರಿಕರಿಸಿ
ತಾರೆಯಂತಾಗಿ ಬಿಡು
ಬೇರೆಯಾದವರು ಹಪಹಪಿಸುವಂತಾಗಿ.

ಕೆರೆ ಕಟ್ಟೆಯಾಗಿ ಬಿಡು
ಬಸವಳಿದವರ ಸಂತೈಸುವಿಕೆಯಲಿ
ನೆರವಾಗಿ ಬಿಡು
ನೆರೆಮನೆಯವರು ನನ್ನವರೆಂದು ಓಲೈಸುವಂತಾಗಿ.

ತೆರಳಿ ಬಿಡು
ನರಳುವ ಮನ್ನವೇ
ಬೆರಳಾಗಿ ಬಿಡು
ಕರುಳ ಕುಡಿಯ ಮಮತೆಗೆ.

ಸರಳಾಗಿ ಬಿಡು
ನಂಬಿಕೆ ದ್ರೋಹ ಬಗೆದವರಿಗೆ
ಹೊರಳಿ ಬಿಡು
ಬೇಡದ ವಸ್ತುಗಳ ಆಹ್ವಾನಕೆ.

ಬಿಟ್ಟು ಬಿಡು
ರಾಗ ದ್ವೆಷಗಳ ನಡೆಯ
ಕೊಟ್ಟು ಬಿಡು
ಒಲವಾಮೃತದ ಸುಧೆ.

ಕೊಟ್ಟು ಬಿಡು
ನಿನ್ನದಲ್ಲದ ವಸ್ತುವ
ಹೊಟ್ಟು ತೂರಿಬಿಡು
ಸತ್ವಯುತ ಜೀವನದ ನಡೆಗೆ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು

Latest News

ಸಂಘಗಳಿಂದ ರೈತರ ಹೋರಾಟಕ್ಕೆ ಬೆಂಬಲ ಘೋಷಣೆ

ಹಳ್ಳೂರ- ಗ್ರಾಮದ ಶ್ರೀ ಬಸವೇಶ್ವರ ವೃತ್ತದಲ್ಲಿ ಹಳ್ಳೂರ, ಹಾಗೂ ಶಿವಾಪೂರ ಗ್ರಾಮದ ಸಹಕಾರಿ ಸಂಘ ಹಾಗೂ ಬ್ಯಾಂಕುಗಳ ಸಿಬ್ಬಂದಿಗಳು ಸ್ವಯಂ ಪ್ರೇರಿತವಾಗಿ ಒಂದು ದಿನ ಸಹಕಾರಿ,...

More Articles Like This

error: Content is protected !!
Join WhatsApp Group