spot_img
spot_img

ಕವನ : ಹೃದಯದ ಮಾತು ಕೇಳಿ

Must Read

spot_img
- Advertisement -

ಹೃದಯ ಮಾತು ಕೇಳಿ

ಮಿಡಿವ ಹೃದಯ
ನಿಲ್ಲುವುದು ಗೊತ್ತಿಲ್ಲ
ದುಡಿವ ಜೀವ
ಮಣ್ಣಾಗುವುದು ತಿಳಿದಿಲ್ಲ.

ಬಣ್ಣನೆಗೆ ನಿಲುಕದ ಜೀವ
ಬಣ್ಣದ ಮಾತಿಗೆ ಮರುಳಾಯಿತಲ್ಲ
ಒಮ್ಮೆ ಕಣ್ಣ ಬೆಳಕು
ಮಗದೊಮ್ಮೆ ಮಸುಕು.

- Advertisement -

ಅದರ ಸಿಹಿ ಮಾತು
ಉದರ ಕಹಿ ಸಂಪತ್ತು
ತಿರುಗಣಿಯ ಬದುಕು
ಉಬ್ಬು ತಬ್ಬುಗಳಲಿ ಜೀಕು.

ಆವೇಗದ ಸನ್ನೆ
ಮರೆತ ನನ್ನನ್ನೇ
ಕಲಿತು ಬಿಡಬೇಕು
ಅನುಭವಿಸುತ ನೂಕು.

ಕೆರಳಿ ಕೆಂಡವೇಕೆ
ಬೆರಳೆಣಿಕೆಯ ಜೀವನಕೆ
ನೆರಳು ಬೆಳಕಿನ ಆಟಕೆ
ಕೊರಳು ಹಿಸುಕುವುದೇಕೆ.

- Advertisement -

ತೆರಳುವುದು ನಿಶ್ಚಿತ
ನಂಬಿಕೆಯೇ ಭಗವಂತ
ನೆಮ್ಮದಿಯ ನಿಟ್ಟುಸಿರಾಗಲಿ
ಸಾಧನೆಯ ಪಥವಾಗಲಿ.

ಸದ್ದಿಲ್ಲದೇ ಬಾನೆತ್ತರಕ್ಕೆ ಏರು
ಸುದ್ದಿ ಬಿತ್ತರವಾಗಲಿ
ಬಿದ್ದೆ ಎಂದು ಕುಗ್ಗದೇ
ಶೋಧನೆಯ ಸಿದ್ದಿಸುತ.

ಮಾತು ಮಾತಿಗೆ ಮುನಿಸೇಕೆ
ಮತಿಯ ಕಡೆಗಣಿಸಿ
ಭ್ರಾಂತಿಯ ಕಳಚು
ಸಂಕ್ರಾಂತಿ ರೂಪಕಕೆ.

ರೇಷ್ಮಾ ಕಂದಕೂರ

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group