spot_img
spot_img

ಕವನ : ಉಳಿಸ ಬನ್ನಿ ಕನ್ನಡ

Must Read

spot_img
- Advertisement -

ಉಳಿಸ ಬನ್ನಿ ಕನ್ನಡ

ಉಳಿಸ ಬನ್ನಿ
ಉಳಿಸ ಬನ್ನಿ
ಉಳಿಸ ಬನ್ನಿ ಕನ್ನಡ
ಇರಲಿ ಬೇರೆ
ಭಾಷೆ ಪ್ರೇಮ
ಅಗ್ರ ಪಟ್ಟ ಕನ್ನಡ

ಬಸವ ಹರಿಹರ
ರಾಘವಾ0ಕ
ಕವಿ ನುಡಿಯು ಕನ್ನಡ
ಹಕ್ಕಬುಕ್ಕ ರಾಷ್ಟಕೂಟ
ಚಾಲುಕ್ಯ ಹೊಯ್ಸಳ
ಗಂಗ ಕದಂಬರ ಕನ್ನಡ

- Advertisement -

ಕಾವೇರಿಯಿಂದ
ಗೋದಾವರಿವರೆಗಿನ
ಸೀಮೆ ದಾಟಿದ ಕನ್ನಡ
ಕೃಷ್ಣ ತುಂಗೆ ಮಲಪ್ರಭೆ
ಭೀಮೆ ಘಟಪ್ರಭೆ.
ಸಿಹಿ ನೀರಿನ ಕನ್ನಡ

ಕಾಕೊಸ್ಥನ ಹಲ್ಮಿಡಿ
ಬಾದಾಮಿಯ ಕಲೆಯ ಬಲೆ
ಶಾಸನದ ಕನ್ನಡ
ವಿಶ್ವ ಪ್ರೇಮ
ಮನೆಯ ಮಾತು
ಜಗದ ಬೆಳಕು ಕನ್ನಡ

ಉಳಿಸ ಬನ್ನಿ
ಉಳಿಸ ಬನ್ನಿ
ಉಳಿಸ ಬನ್ನಿ ಕನ್ನಡ
______________________
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*

- Advertisement -
- Advertisement -

Latest News

ಕಿಟ್ ಪಡೆದು ಸಂಭ್ರಮದಿಂದ ರಂಜಾನ್ ಆಚರಿಸಿ – ಮಲೀಕ ಹುಣಶ್ಯಾಳ

ಮೂಡಲಗಿ: ಪ್ರತಿ ವರ್ಷ ರಂಜಾನ್ ಹಬ್ಬದ ಸಂದರ್ಭದಲ್ಲಿ ನಮ್ಮ ಅಂಜುಮನ್ ಸಂಸ್ಥೆಯಿಂದ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವಂತೆ ಈ ವರ್ಷ ಕೂಡ ವಿತರಣೆ...
- Advertisement -

More Articles Like This

- Advertisement -
close
error: Content is protected !!
Join WhatsApp Group