ಕವನ : ಡಾ. ಕಲಬುರ್ಗಿ ಎಂಬತ್ತಾರು

Must Read

ಡಾ. ಕಲಬುರ್ಗಿ ಎಂಬತ್ತಾರು
————————–
ಬರ ಬರ ಬಿಸಿಲು
ಬಿರುಕಲು ಭೂಮಿ
ಮಳೆಯಿಲ್ಲ ನೀರಿಲ್ಲ
ಮನೆ ಹೊಲ ಹಳ್ಳ
ಬಿರಿದು ಬೆಳೆದನು
ದಿಟ್ಟ ಮಲ್ಲಪ್ಪ .
ಅಧ್ಯಯನ ಸಂಶೋಧನೆ
ಕನ್ನಡ ಬಸವಣ್ಣ
ನಾಟಕ ಸಂಗೀತದ ಗೀಳು
ನೇರ ನುಡಿ ಸಂಘರ್ಷ
ಒಳಗೊಳಗೇ ಕೊರಗುವ
ಮೃದು ಮನ
ಹಾಸ್ಯ ಹರಟೆ ಸಂವಾದ
ಚಿಂತನೆ ಯೋಜನೆಗಳು.
ಅಂದು ಕುಹುಕಿಗಳು
ಗುಂಡಿಕ್ಕಿ ಕೊಂದರು
ಸತ್ತದ್ದು ವ್ಯಕ್ತಿ ಸತ್ಯವಲ್ಲ
ಡಾ. ಕಲಬುರ್ಗಿ ಒಂಟಿ ಮರ
ಕನ್ನಡದ ಕೊಲಂಬಸ್
ಎಂಟು ದಶಕದ ನೆನಪು
ಎಂಟು ಶತಕದ ನೆರಳು.
ಎಂ ಎಂ ಕಲಬುರ್ಗಿ ಅಮರ ರಹೇ
——————————-
*ಡಾ.ಶಶಿಕಾಂತ.ಪಟ್ಟಣ ಪುಣೆ*

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group