ಕವನ: ಉತ್ಸವ-ನಿತ್ಯೋತ್ಸವ

Must Read

ಉತ್ಸವ-ನಿತ್ಯೋತ್ಸವ

ನಮ್ಮ ಹೆಮ್ಮೆಯ ಕರುನಾಡು
ನಿತ್ಯ ಉತ್ಸವಗಳ ಬೀಡು
ಸವಿನುಡಿಯ ಸಾಂಸ್ಕೃತಿಕ ನೆಲೆನಾಡು
ಶಿಲ್ಪಕಲಾ ವೈಭವದಿ ಬೇಲೂರು-ಹಳೇಬೀಡು.
ಬಾದಾಮಿಯಲಿ ಚಾಲುಕ್ಯೋತ್ಸವ
ವಿಜಯನಗರದೊಳು ಹಂಪಿ ಉತ್ಸವ
ಪಟ್ಟದಕಲ್ಲಿನೊಳು ನವರಸಪುರ ಉತ್ಸವ
ಬನವಾಸಿಯೊಳು ಕದಂಬೋತ್ಸವ
ವಿಜಯದುಂಧುಬಿಯ ನವರಾತ್ರಿ ಉತ್ಸವ

ವೀರ ಹೋರಾಟ ಚರಿತೆಯ ಕಿತ್ತೂರು ಉತ್ಸವ
ಸಂಭ್ರಮ ಸಡಗರದೊಳು ರಾಜ್ಯೋತ್ಸವ
ಚಿತ್ರೋತ್ಸವ ನಾಟಕೋತ್ಸವ ಕಾರ್ತಿಕೋತ್ಸವ
ಕವಿ-ಪುಂಗವರ ಹೆಸರೊಳು ಜನ್ಮ ಶತಮಾನೋತ್ಸವ
ದೇವಾಲಯಗಳೊಳು ಲಕ್ಷದೀಪೋತ್ಸವ
ವಿಶ್ವವಿದ್ಯಾಲಯಗಳೊಳು ಘಟಿಕೋತ್ಸವ
ಮನೆ-ಮನಗಳಲಿ ಹಬ್ಬಹರಿದಿನಗಳುತ್ಸವ
ಸಡಗರ ಸಂತಸದಿ ಉತ್ಸವ !

ಭಾಷೆಯ ಹೆಸರೊಳು ಜಾಗೃತಿ ಉತ್ಸವ
ಚೈತನ್ಯ ತುಂಬಿದ ಯಾಂತ್ರಿಕ ಬದುಕಲಿ
ಪ್ರಗತಿಗೆ ಪೂರಕ ಉತ್ಸವ-ನಿತ್ಯೋತ್ಸವ !


ವೈ.ಬಿ.ಕಡಕೋಳ(ಸಂಪನ್ಮೂಲ ವ್ಯಕ್ತಿಗಳು) ಮುನವಳ್ಳಿ -೫೯೧೧೧೭

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group